ಬೆಂಗಳೂರು : ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣದಲ್ಲಿ ಹದಿನೈದು ಸಂವತ್ಸರಗಳನ್ನು ಪೂರೈಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುತ್ತಿರುವ ಸಅದಿಯ ಎಜುಕೇಶನಲ್ ಫೌಂಡೇಷನ್ ಬೆಂಗಳೂರು ಇದರ ಸ್ಪಟಿಕ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಭಾಗದಲ್ಲಿ ಮುಖ್ತಸರ್ ಮತ್ತು ಲೌಕಿಕ ವಿಭಾಗದಲ್ಲಿ ಬಿಕಾಂ ಶಿಕ್ಷಣ ಪೂರ್ಣಗೊಳಿಸಿದ 20 ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮ ಮತ್ತು 15 ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು ಬ್ಯಾರಿ ಉದ್ಯಮಿ ಅಭಿಮಾನ್ ಕಂಪೆನಿಯ ಮಾಲಕರಾದ ಅಲ್ ಹಾಜ್ ಬಿ.ಎಂ ಉಮರ್ ಹಾಜಿಯವರ ಸಹಯೋಗದೊಂದಿಗೆ ನಡೆಯುವ ಅದ್ದೂರಿ ಕಾರ್ಯಕ್ರಮ ದಿನಾಂಕ 15 ಆಗಸ್ಟ್ 2019 ಗುರುವಾರ 3 ಗಂಟೆಯಿಂದ ರಾತ್ರಿ 9ರ ತನಕ ಅರಮನೆ ಮೈದಾನದಲ್ಲಿ ನಡೆಯಲಿದೆ.
ದಕ್ಷಿಣ ಭಾರತದ ಅತ್ಯುನ್ನತ ವಿದ್ಯಾ ಕೇಂದ್ರವಾದ ಜಾಮಿಯಾ ಸಅದಿಯಾ ಅರೇಬಿಯಾ ಕಾಸರಗೋಡು ಇದರ ಅಧ್ಯಕ್ಷರೂ ಆಧ್ಯಾತ್ಮಿಕ ನಾಯಕರೂ ಆದ ಅಸ್ಸಯ್ಯಿದ್ ಕೆ.ಎಸ್ ಆಟ್ಟಕೊಯ ತಂಙಳ್ ಕುಂಬೊಳ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಧಾರ್ಮಿಕ ,ರಾಜಕೀಯ ,ಸಾಮಾಜಿಕ ರಂಗದ ಹಲವು ನಾಯಕರು ಬಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸಾರಥಿ ಮೌಲಾನಾ ಎನ್.ಕೆ.ಎಂ ಶಾಫಿ ಸಅದಿ ತಿಳಿಸಿದ್ದಾರೆ.






