janadhvani

Kannada Online News Paper

ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಕಿಲ್ಲೂರು ಸ್ವಲಾತ್ ಮಜ್ಲಿಸ್ ನಲ್ಲಿ ಪ್ರಶಸ್ತಿ ಪ್ರಧಾನ

ಬೆಳ್ತಂಗಡಿ: ಸ್ಪಿರಿಟ್ ಆಫ್ ಸುನ್ನೀ ಮುಸ್ಲಿಂ ವಾಟ್ಸಪ್ ಗ್ರೂಪ್, ಬೆಳ್ತಂಗಡಿ ಆಯೋಜಿಸಿದ “ರಾಷ್ಟ್ರ ರಾಜಕೀಯದಲ್ಲಿ ಅಹ್ಲ್‌ಸುನ್ನತ್ತ್‌ನ ಪಾತ್ರ” ಎಂಬ ವಿಷಯದ ಕುರಿತಾದ “ಪ್ರಬಂಧ ಸ್ಪರ್ಧೆ 2019” ಯಲ್ಲಿ ಪ್ರಥಮ ಸ್ಥಾನ ಪಡೆದ ಇಬ್ರಾಹಿಂ ಖಲೀಲ್ ಪುತ್ತೂರು ಹಾಗೂ ದ್ವಿತೀಯ ಸ್ಥಾನ ಪಡೆದ ಇರ್ಷಾದ್ ಲಾಡಿ ಇವರಿಗೆ ಜು.6 ರಂದು ನಡೆದ ಕಿಲ್ಲೂರು ಮಜ್ಲಿಸ್ ವಸೀಲತುಲ್ಲಾಹ್ ಸ್ವಲಾತ್ ಮಜ್ಲಿಸ್ ನಲ್ಲಿ ಅಸಯ್ಯದ್ ಶಿಹಾಬುದ್ದೀನ್ ಅಲ್ – ಹೈದ್ರೋಸ್ ಅಸ್ಸಖಾಫ್ ಕಿಲ್ಲೂರು ತಂಙಳ್ ರವರ ದಿವ್ಯ ಹಸ್ತದಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಪ್ರಭಾಷಣಕಾರರಾದ ಬಶೀರ್ ಮದನಿ ಕೂಳೂರು, ಉಸ್ಮಾನ್ ಜೌಹರಿ ಉಸ್ತಾದ್, ಹಾಗೂ ಶರೀಫ್ ಸ-ಅದಿ ಕಿಲ್ಲೂರು ಹಾಗೂ ಇನ್ನಿತರ ಸಂಘಟನಾ ನಾಯಕರು ಉಪಸ್ಥಿತರಿದ್ದರು.