ನವದೆಹಲಿ:ಕೇಂದ್ರ ಸರ್ಕಾರವು ಜನಪ್ರಿಯ ವಾಟ್ಸಪ್ಗೆ ಪರ್ಯಾಯವಾಗಿ ಪ್ರತ್ಯೇಕ ವಾಟ್ಸಪ್ ಮಾದರಿಯ ಆ್ಯಪ್ ಹೊರತರಲು ನಿರ್ಧರಿಸಿದೆ. ನೂತನ ಆ್ಯಪ್ ತಯಾರಿ ಕುರಿತು ಸರಕಾರ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದ್ದು, ಬದಲಾಗುತ್ತಿರುವ ಜಾಗತಿಕ ರಾಜಕೀಯ ವಿದ್ಯಮಾನಗಳು ಇದಕ್ಕೆ ಪೂರಕವಾಗಿದೆ ಎಂದು ಹೇಳಲಾಗಿದೆ.
ಮುಂದಿನ ದಿನಗಳಲ್ಲಿ ದತ್ತಾಂಶ ಸುರಕ್ಷತೆ ಮತ್ತು ಸಂವಹನ, ಕಳವು ಬಗ್ಗೆ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದೆ. ಹೀಗಾಗಿ ಸರಕಾರಿ ಮಟ್ಟದ ಎಲ್ಲ ಸಂವಹನ, ಕೆಲಸ ಕಾರ್ಯಗಳಿಗೆ ಅನುಕೂವಾಗುವಂತೆ ಆ್ಯಪ್ ರೂಪಿಸಿ, ಅದನ್ನು ಎಲ್ಲ ಇಲಾಖೆಗಳಲ್ಲಿ ಬಳಸುವಂತೆ ಯೋಜನೆ ರೂಪಿಸಲಾಗುತ್ತಿದೆ.
ಅಮೆರಿಕದಲ್ಲಿ ಹುವೈ ಜತೆಗಿನ ಜಗಳ ಮತ್ತು ಚೀನಾದ ಸಂವಹನ ಸರಕುಗಳ ಮೇಲಿನ ನಿರ್ಬಂಧ, ದತ್ತಾಂಶ ಸೋರಿಕೆಯಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಗ್ರಾಹಕರ ಸುರಕ್ಷತೆ ಮತ್ತು ಮಾಹಿತಿ ಗೌಪ್ಯತೆಗಾಗಿ ಪ್ರತ್ಯೇಕ ಆ್ಯಪ್ ರೂಪಿಸಿ, ದೇಶದಲ್ಲಿ ಗರಿಷ್ಠ ಭದ್ರತೆಯ ಸರ್ವರ್ ಅಳವಡಿಸಿ, ಅದರಲ್ಲಿ ದತ್ತಾಂಶ ಸಂಗ್ರಹಿಸುವ ಗುರಿ ಹೊಂದಿದೆ.






