ದುಬೈ, ಜೂ.17: ಶಾಲಾ ಬಸ್ಸಿನಲ್ಲೇ ಉಳಿದುಕೊಂಡಿದ್ದ ಕೇರಳದ 6 ವರ್ಷದ ಬಾಲಕನೊಬ್ಬ ಹಲವು ಗಂಟೆಗಳ ಕಾಲ ಒಬ್ಬಂಟಿಯಾಗಿದ್ದು,ಬಿಸಿಲಿನ ತಾಪದಿಂದ ಮೃತ ಪಟ್ಟ ಘಟನೆ ಅಲ್ ಖೂಸ್ ನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ಅಲ್ ಮನಾರ್ ಖುರ್ ಆನ್ ಸ್ಟಡೀ ಸೆಂಟರ್ ನ ವಿದ್ಯಾರ್ಥಿ, ಕೇರಳದ ತಲಶ್ಶೇರಿ ಮುಝುಪಿಲಂಗಾಡ್ ಫೈಝಲ್ ಎಂಬವರ ಮಗ ಮುಹಮ್ಮದ್ ಫರ್ಹಾನ್ ಮೃತ ಪಟ್ಟ ಬಾಲಕ.
ಬೆಳಿಗ್ಗೆ ಎಂಟರ ಸುಮಾರಿಗೆ ಶಾಲಾವರಣ ಪ್ರವೇಶಿಸಿದ ಬಸ್ಸಿನಿಂದ ಇತರ ವಿದ್ಯಾರ್ಥಿಗಳು ಇಳಿದರೂ ಪೈಸಲ್ ಇಳಿದಿರಲಿಲ್ಲ.
ಇದರ ಅರಿವು ಬಾರದೆ ಚಾಲಕ ಮತ್ತು ನಿರ್ವಾಹಕ ಬಸ್ಸಿನ ಬಾಗಿಲ ಬೀಗ ಹಾಕಿ ತೆರಳಿದ್ದರು. ಗಂಟೆಗಳ ನಂತರ ಬಾಗಿಲು ತೆರೆದಾಗ ಬಿಸಿಲಿಗೆ ಬಾಡಿ ಹೋಗಿದ್ದ ಎಳೆ ಬಾಲಕನ ಮರಣ ಸಂಭವಿಸಿತ್ತು.ಮಧ್ಯಾಹ್ನ 3ರವೇಳೆಗೆ ಬಾಲಕ ಮೃತಪಟ್ಟಿರುವ ಬಗ್ಗೆ ದೂರು ಲಭಿಸಿದ್ದಾಗಿ ದುಬೈ ಪೊಲೀಸರು ಹೇಳಿದ್ದಾರೆ.
“ಮಕ್ಕಳನ್ನು ಮರಳಿ ಮನೆಗೆ ಕರೆದೊಯ್ಯಲು ಚಾಲಕ ಬಸ್ಸು ತೆರೆದಾಗ ಈತ ಮೃತಪಟ್ಟಿರುವುದು ಕಂಡುಬಂದಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಈತನ ಪೋಷಕರು ದೀರ್ಘಕಾಲದಿಂದ ದುಬೈ ನಿವಾಸಿಗಳು. ತಂದೆ ಫೈಝಲ್, ಕೇರಳ ಹಾಗೂ ದುಬೈನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ