ಮಾಣಿ : ತಾನು ಧರಿಸಿದ ವಸ್ತ್ರ ,ಚಿನ್ಬಾಭರಣಗಳನ್ನು ಕೂಡಲೇ ಕಳಚಿ ತೆಗೆಯಲಾಗುತ್ತದೆ,ಮತ್ತೆ ನಮ್ಮದೆಂದು ನಮಗೆ ಸಿಗುವುದು ನಾವು ಮಾಡಿದ ಪುಣ್ಯ ಕರ್ಮಗಳು ಮಾತ್ರ,ಆಸ್ತಿ ಅಂತಸ್ತು, ಸೊತ್ತುಗಳನ್ನು ಇಲ್ಲೇ ಬಿಟ್ಟು ಹೋಗುತ್ತೇವೆ ಮರಣಹೊಂದಿದ ಕೂಡಲೇ ನಮ್ಮ ಹೆಸರೂ ಕೂಡ ತೆಗೆದು ಮಯ್ಯಿತ್ ಅಂತ ಹೆಸರಿಡಲಾಗುತ್ತದೆ .
ಅದನ್ನೆಲ್ಲಾ ಜೀವವಿರುವಾಗ ಪದೇ ಪದೇ ನೆನಪಿಸಿಕೊಂಡರೆ ಯಾವುದೇ ರೀತಿಯ ದುಷ್ಕೃತ್ಯಗಳು ನಮ್ಮಿಂದ ಉಂಟಾಗದು,ಆದರೆ ನಾವು ಆ ಮರಣವನ್ನೇ ಮರೆತು ಇಲ್ಲಿನ ಲೌಕಿಕ ಜೀವನವನ್ನೇ ನೆಚ್ಚಿಕೊಂಡು ಬದುಕಿದಾಗ ಪಾಪಕೃತ್ಯಗಳು ಯಾವುದೇ ಅಂಜಿಕೆ ಇಲ್ಲದೆ ನಮ್ಮಿಂದ ನಡೆದುಹೋಗುತ್ತದೆ ಅಥವಾ ಮಾಡುತ್ತೇವೆ,ಅಹಂಕಾರಿಯಾಗದೆ ಯಾರಿಗೂ ಕೇಡು ಬಯಸದೆ ಯಾರಿಗೂ ಅನ್ಯಾಯ ಮಾಡದೆ ಮರಣದ ಭಯದೊಂದಿಗೆ ಸಜ್ಜನರಾಗಿ ಬದುಕಿದರೆ ,ಆ ಮೂಲಕ ಪರಲೋಕ ವಿಜಯದ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಮಾಣಿ ದಾರುಲ್ ಇರ್ಶಾದ್ ನಲ್ಲಿ ತರಾವೀಹ್ ನಮಾಝ್ ಬಳಿಕದ ಮತ ಪ್ರಭಾಷಣದಲ್ಲಿ ಇಬ್ರಾಹಿಂ ಸಅದಿ ಉಸ್ತಾದರು ಹೇಳಿದರು.
ಭೂಲೋಕದ ಕ್ಷಣಿಕ ಜೀವನಕ್ಕಾಗಿ ಶಾಶ್ವತ ಪರಲೋಕ ಜೀವನವನ್ನು ಮರೆತು ಜೀವಿಸುವ ಬಗ್ಗೆ ಅವರು ಎಚ್ಚರಿಸಿದರು.
ವರದಿ : ಸಲೀಂ ಮಾಣಿ















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ