ನವದೆಹಲಿ: ಭಾರತದಲ್ಲಿ ಕತರ್ ಆರಂಭಿಸಲು ಉದ್ದೇಶಿಸಿರುವ ವೀಸಾ ಕೇಂದ್ರಗಳ ಪೈಕಿ ಪ್ರಥಮ ಕೇಂದ್ರವನ್ನು ದೆಹಲಿಯಲ್ಲಿ ಉದ್ಘಾಟಿಸಲಾಯ್ತು. ಕತರ್ ನಲ್ಲಿ ಲಭ್ಯವಾಗಲಿರುವ ಉದ್ಯೋಗಿಗಳ ಪೂರ್ಣ ವೀಸಾ ಪ್ರಕ್ರಿಯೆ ಈ ಕೇಂದ್ರದಲ್ಲಿ ಪೂರ್ಣಗೊಳ್ಳಲಿದೆ.
ಭಾರತದ ಏಳು ರಾಜ್ಯಗಳಲ್ಲಿ ಕತಾರ್ ಈ ರೀತಿಯ ಕೇಂದ್ರಗಳನ್ನು ಪ್ರಾರಂಭಿಸಲಿದ್ದು, ದೆಹಲಿಯಲ್ಲಿ ಮೊದಲನೆಯ ಕೇಂದ್ರ ಪ್ರಾರಂಭವಾಗಿದೆ. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು ಭಾರತದಲ್ಲಿನ ಕತರ್ ರಾಯಭಾರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಮೂಲಕ ದೆಹಲಿ ಮತ್ತು ನೆರೆಯ ರಾಜ್ಯಗಳ ಉದ್ಯೋಗಿಗಳ ಸಂಪೂರ್ಣ ವೀಸಾ ಪ್ರಕ್ರಿಯೆಗೆ ಈ ಕೇಂದ್ರ ನೆರವಾಗಲಿದೆ.
ಸಹಿ ಒಪ್ಪಂದ, ಪ್ರಮಾಣಪತ್ರ ಪರೀಕ್ಷೆಗಳು, ವೈದ್ಯಕೀಯ ಪರೀಕ್ಷೆ, ಬೆರಳಚ್ಚುಗಳು ಮತ್ತು ಇತರ ಸೇವೆಗಳು ದೆಹಲಿಯ ವೀಸಾ ಕೇಂದ್ರದಲ್ಲಿ ಲಭ್ಯವಿರಲಿದ್ದು, ಅರೆಬಿಕ್, ಇಂಗ್ಲಿಷ್ ಭಾಷೆಗಳ ಹೊರತಾಗಿ, ಹಿಂದಿಯಲ್ಲಿ ಕೂಡ ಈ ಕೇಂದ್ರದಲ್ಲಿ ಸೇವೆ ಲಭ್ಯವಿದೆ.
ದೆಹಲಿ ನಂತರ ಮುಂಬೈನಲ್ಲಿ ಕಾರ್ಯಾಲಯ ಕಾರ್ಯನಿರ್ವಹಿಸಲಿದ್ದು, ನಂತರ ಚೆನ್ನೈ, ಹೈದರಾಬಾದ್, ಕೊಚ್ಚಿ, ಲಕ್ನೋ, ಕೋಲ್ಕತ್ತಾದಲ್ಲೂ ಮುಂದಿನ ತಿಂಗಳಿನಿಂದ ಕೇಂದ್ರಗಳು ಆರಂಭವಾಗಲಿವೆ. ಕತಾರ್ ಉದ್ಯೋಗ ಹುಡುಕುವವರು ಮತ್ತು ಕಂಪನಿಗಳಿಗೆ ಆರಾಮದಾಯಕವಾದ ರೀತಿಯಲ್ಲಿ ವೀಸಾ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ಕಾರ್ಯವಿಧಾನಗಳನ್ನು ಸುಲಭಗೊಳಿಸುವ ಮತ್ತು ವೀಸಾ ವಂಚನೆಗಳನ್ನು ತಡೆಯುವ ಉದ್ದೇಶಕ್ಕಾಗಿ ಕಳೆದ ವರ್ಷ, ಕತಾರ್ ವೀಸಾ ಕೇಂದ್ರಗಳನ್ನು ಘೋಷಿಸಿತು. ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಅಕ್ಟೋಬರ್ ನಲ್ಲಿ ಮೊದಲ ಕೇಂದ್ರ ಪ್ರಾರಂಭಗೊಂಡಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ