ಡಿ.3 ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ‘ *ಕನೆಕ್ಟ್ – 18’* ಬೃಹತ್ ಸಾಮುದಾಯಿಕ ಸಮ್ಮಿಲನದ ಪ್ರಚಾರಾರ್ಥ ಬಡ ಹೆಣ್ಣಿನ ಮದುವೆಗೆ ಸಾಂತ್ವನವಾಗಿ ಇತ್ತೀಚೆಗೆ ಎಸ್ಸೆಸ್ಸೆಫ್ ತೊಕ್ಕೇೂಟು ಸೆಕ್ಟರ್ ರಿಲೀಫ್ ಸರ್ವೀಸ್ ವತಿಯಿಂದ ಚೆಕ್ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ರಿಲೀಫ್ ಸರ್ವೀಸ್ ಡೈರೆಕ್ಟರ್ ಅಲ್ತಾಫ್ ಕುಂಪಲ ರ ಅಧ್ಯಕ್ಷತೆಯಲ್ಲಿ ವಾದೀ ಇರ್ಫಾನ್ ಕುಂಪಲದಲ್ಲಿ ನಡೆದ ಪ್ರಸ್ತುತ ಕಾರ್ಯಕ್ರಮವನ್ನು ರಿಲೀಫ್ ಕನ್ವೀನರ್ ಇಲ್ಯಾಸ್ ಸಖಾಫಿ ಉದ್ಘಾಟಿಸಿದರು.
ವೇದಿಕೆಯಲ್ಲಿ ತೊಕ್ಕೇೂಟು ತಾಜುಲ್ ಉಲಮಾ ಮಸೀದಿ ಮುಅಝ್ಝಿನ್ ಅಬ್ದುರ್ರಝಾಕ್ ಲತೀಫಿ,ರಿಲೀಫ್ ನಿರ್ದೇಶಕ ಉಮರ್ ಹಾಜಿ,ತೊಕ್ಕೂಟು ಸೆಕ್ಟರ್ ಅಧ್ಯಕ್ಷ ಯು.ಎಸ್ ಜಾಫರ್,ಪ್ರ.ಕಾರ್ಯದರ್ಶಿ ಇಮ್ರಾನ್,ಕೇೂಶಾಧಿಕಾರಿ ಶೆಮೀರ್ ಉಪಸ್ಥಿತರಿದ್ದರು.
ರಿಲೀಫ್ ಸರ್ವೀಸ್ ಸಂಚಾಲಕ ಬಾತಿಶ್ ಮಂಚಿಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.