ಬಂಟ್ವಾಳ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ 2018 ರ ರಾಜ್ಯ ಮಟ್ಟದ ಮೊದಲ ಹಂತದ ಚುನಾವಣಾ ಕಾರ್ಯಾಗಾರ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ರವರ ಅಧ್ಯಕ್ಷತೆಯಲ್ಲಿ ಸ್ಪರ್ಶ ಕಲಾ ಮಂದಿರ ಬಿಸಿರೋಡ್ ನಲ್ಲಿ ನಡೆಯಿತು. ಕರ್ನಾಟಕ ಸುನ್ನೀ ಕೋ ಓರ್ಡಿನೇಶನ್ ಇದರ ಪ್ರ.ಕಾರ್ಯದರ್ಶಿ ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ಣ ದುಆ ನೆರವೇರಿಸಿದರು.
ಚಿಂತಕ ಖ್ಯಾತ ವಿದ್ವಾಂಸ ಎಸ್.ಜೆ.ಯು ಪ್ರ.ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ಉದ್ಘಾಟಿಸಿದರು.
ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಹೊಸ ಕಾರ್ಯಕರ್ತರ ಸೃಷ್ಟಿ ಎಂಬ ವಿಷಯದಲ್ಲಿ ತರಗತಿಯನ್ನು ನಡೆಸಿದರು.
ರಾಜ್ಯ ಚುನಾವಣಾ ಮಂಡಳಿ ಕನ್ವೀನರ್ ಹಾಫಿಳ್ ಯಾಕೂಬ್ ಸ ಅದಿ ನಾವೂರು ಚುನಾವಣಾ ಕಾರ್ಯಾಗಾರ ಮಾಹಿತಿ ವಿವರಿಸಿದರು,ಕಾರ್ಯಕ್ರಮದಲ್ಲಿ
ರಾಜ್ಯಾಧ್ಯಕ್ಷ ಚುನಾವಣಾ ಮಂಡಳಿ ಚಯರ್ ಮ್ಯಾನ್ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು,ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ, ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ,ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ,ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ, ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ಅಂಜದಿ,ರಾಜ್ಯ ನಾಯಕರಾದ ಉಸ್ಮಾನ್ ಹಂಡುಗುಳಿ,ಇಸ್ಮಾಯಲ್ ಮಾಸ್ಟರ್ ಮೊಂಟೆಪದವು,ಹುಸೈನ್ ಸ ಅದಿ ಹೊಸ್ಮಾರ್, ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು,ತಾಜುದ್ದೀನ್ ಫಾಳಿಲ್,ನವಾಝ್ ಭಟ್ಕಳ್,ಇಬ್ರಾಹಿಂ ಚಿಕ್ಕಮಗಳೂರು ಮೊದಲಾದವರು ನಾಯಕರು ಉಪಸ್ಥಿತರಿದ್ದರು. ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳ ನಾಯಕರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗವನ್ನು ಪಡೆದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ನಗರ ಸ್ವಾಗತಿಸಿ,ರಾಜ್ಯ ಸದಸ್ಯ ರವೂಫ್ ಖಾನ್ ವಂದಿಸಿದರು.