ಕಲ್ಲಡ್ಕ : SSF ರಾಜ್ಯ ಸಮಿತಿಯ ನಿರ್ದೇಶನದಂತೆ ssf ಕಲ್ಲಡ್ಕ ಸೆಕ್ಟರ್ ಇದರ ಅಧೀನದಲ್ಲಿ ದಿನಾಂಕ 5ರಂದು ” ನಮ್ಮ ಮಕ್ಕಳು ನಮ್ಮವರಾಗಲು”ಜಾಗೃತಿ ಅಭಿಯಾನ ನಡೆಸಲಾಯ್ತು. ಶೈಖುನಾ ಸುರಿಬೈಲ್ ಉಸ್ತಾದರ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತದನಂತರ ಸರ್ಕಳ ನಗರ,ನಿರ್ಬೈಲು ,ಖಂಡಿಗ ಸುರಿಬೈಲು,ಕೊಕ್ಕಾಪುಣಿ ಜಂಕ್ಷನ್ , ಬೋಳಂತೂರು ಮುಂತಾದ ಕಡೆಗಳಲ್ಲಿ ಯುವ ಭಾಷಣಗಾರರಾದ ಸಿದ್ದೀಕ್ ಮುಸ್ಲಿಯಾರ್ ಕುಕ್ಕಾಜೆ (ವಿದ್ಯಾರ್ಥಿ ದಾರುಲ್ ಅಶ್-ಅರಿಯ್ಯ )ಹಾಗೂ ಸಪ್ವಾನ್ ನಾರ್ಶ ಸಂದೇಶ ಭಾಷಣ ಮಾಡಿದರು.
ಸಮಾರೋಪ ಸಮಾರಂಭವು ಇಬ್ರಾಹಿಂ ಸುರಿಬೈಲು (ಅಧ್ಯಕ್ಷರು SSF ಕಲ್ಲಡ್ಕ ಸೆಕ್ಟರ್)ಇವರ ಅಧ್ಯಕ್ಷತೆಯಲ್ಲಿ SSF ನಗರ N.C ರೋಡ್ ನಲ್ಲಿ ನಡೆಯಿತು.ಅಕ್ಬರ್ ಅಲಿ ಮದನಿ ಸೆರ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ಬಾಸ್ ಮುಸ್ಲಿಯಾರ್ ದುಆ ನೆರವೇರಿಸಿ. ಕರೀಂ ಕದ್ಕರ್ ಸ್ವಾಗತಿಸಿದರು.ಹೈದರ್ ಅಶ್ರಫಿ ಕಟ್ಟತ್ತಿಲ,ಸಿದ್ದೀಕ್ ಮುಸ್ಲಿಯಾರ್ ಕುಕ್ಕಾಜೆ ಹಾಗೂ ಸಪ್ವಾನ್ ನಾರ್ಶ ಸಂದೇಶ ಭಾಷಣ ನಡೆಸಿದರು.
ಮುಖ್ಯ ಅತಿಥಿಗಳಾಗಿ ಕಾದ್ರಿಯಾಕ ಕೊಕ್ಕಪುಣಿ , ರಫೀಕ್ ಮಾಡದ ಬಲಿ , ಹನೀಫ್ ಸಾಲೆತ್ತೂರು , ಮುಹಮ್ಮದ್ ಕುಂಬಳೆ, ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಗಲಿದ ssf ಕಾರ್ಯಕರ್ತರಾದ ರಫೀಕ್ ಕುಲ್ಯಾರು , ಇಬ್ರಾಹಿಂ ಬಾರೆಬೇಟ್ಟು ಝುಬೈರ್ ಮೊಂತಿಮಾರ್ ರವರ ಮೇಲೆ ತಹ್ಲೀಲ್ ಹೇಳಿ ಹದಿಯ ಮಾಡಲಾಯಿತು.
ವರದಿ:ಮುಹಮ್ಮದ್ ಮಜೀದ್ ಕದ್ಕರ್ ಪ್ರ,ಕಾರ್ಯದರ್ಶಿSSF ಕಲ್ಲಡ್ಕ ಸೆಕ್ಟರ್















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ