ಕಲ್ಲಡ್ಕ : SSF ರಾಜ್ಯ ಸಮಿತಿಯ ನಿರ್ದೇಶನದಂತೆ ssf ಕಲ್ಲಡ್ಕ ಸೆಕ್ಟರ್ ಇದರ ಅಧೀನದಲ್ಲಿ ದಿನಾಂಕ 5ರಂದು ” ನಮ್ಮ ಮಕ್ಕಳು ನಮ್ಮವರಾಗಲು”ಜಾಗೃತಿ ಅಭಿಯಾನ ನಡೆಸಲಾಯ್ತು. ಶೈಖುನಾ ಸುರಿಬೈಲ್ ಉಸ್ತಾದರ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತದನಂತರ ಸರ್ಕಳ ನಗರ,ನಿರ್ಬೈಲು ,ಖಂಡಿಗ ಸುರಿಬೈಲು,ಕೊಕ್ಕಾಪುಣಿ ಜಂಕ್ಷನ್ , ಬೋಳಂತೂರು ಮುಂತಾದ ಕಡೆಗಳಲ್ಲಿ ಯುವ ಭಾಷಣಗಾರರಾದ ಸಿದ್ದೀಕ್ ಮುಸ್ಲಿಯಾರ್ ಕುಕ್ಕಾಜೆ (ವಿದ್ಯಾರ್ಥಿ ದಾರುಲ್ ಅಶ್-ಅರಿಯ್ಯ )ಹಾಗೂ ಸಪ್ವಾನ್ ನಾರ್ಶ ಸಂದೇಶ ಭಾಷಣ ಮಾಡಿದರು.ಸಮಾರೋಪ ಸಮಾರಂಭವು ಇಬ್ರಾಹಿಂ ಸುರಿಬೈಲು (ಅಧ್ಯಕ್ಷರು SSF ಕಲ್ಲಡ್ಕ ಸೆಕ್ಟರ್)ಇವರ ಅಧ್ಯಕ್ಷತೆಯಲ್ಲಿ SSF ನಗರ N.C ರೋಡ್ ನಲ್ಲಿ ನಡೆಯಿತು.ಅಕ್ಬರ್ ಅಲಿ ಮದನಿ ಸೆರ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ಬಾಸ್ ಮುಸ್ಲಿಯಾರ್ ದುಆ ನೆರವೇರಿಸಿ. ಕರೀಂ ಕದ್ಕರ್ ಸ್ವಾಗತಿಸಿದರು.ಹೈದರ್ ಅಶ್ರಫಿ ಕಟ್ಟತ್ತಿಲ,ಸಿದ್ದೀಕ್ ಮುಸ್ಲಿಯಾರ್ ಕುಕ್ಕಾಜೆ ಹಾಗೂ ಸಪ್ವಾನ್ ನಾರ್ಶ ಸಂದೇಶ ಭಾಷಣ ನಡೆಸಿದರು.
ಮುಖ್ಯ ಅತಿಥಿಗಳಾಗಿ ಕಾದ್ರಿಯಾಕ ಕೊಕ್ಕಪುಣಿ , ರಫೀಕ್ ಮಾಡದ ಬಲಿ , ಹನೀಫ್ ಸಾಲೆತ್ತೂರು , ಮುಹಮ್ಮದ್ ಕುಂಬಳೆ, ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಗಲಿದ ssf ಕಾರ್ಯಕರ್ತರಾದ ರಫೀಕ್ ಕುಲ್ಯಾರು , ಇಬ್ರಾಹಿಂ ಬಾರೆಬೇಟ್ಟು ಝುಬೈರ್ ಮೊಂತಿಮಾರ್ ರವರ ಮೇಲೆ ತಹ್ಲೀಲ್ ಹೇಳಿ ಹದಿಯ ಮಾಡಲಾಯಿತು.
ವರದಿ:ಮುಹಮ್ಮದ್ ಮಜೀದ್ ಕದ್ಕರ್ ಪ್ರ,ಕಾರ್ಯದರ್ಶಿSSF ಕಲ್ಲಡ್ಕ ಸೆಕ್ಟರ್