janadhvani

Kannada Online News Paper

ಸೆಂಟಿನರಿ ಸೆನೆಟ್ ಹಾಗೂ ನಾಟು ದರ್ಸ್ ಉದ್ಘಾಟನೆ: ಸ್ಥಳೀಯ ಸ್ವಾಗತ ಸಮಿತಿ ರಚನೆ

ಮಂಗಳೂರು : ಸಮಸ್ತ ಸೆಂಟಿನರಿ ಅಂಗವಾಗಿ ಜುಲೈ 5 ರಂದು ವೈಭವ್ ಹಾಲ್ ಅರ್ಕುಳ ಫರಂಗಿಪೇಟೆಯಲ್ಲಿ ನಡೆಯುವ ಸೆಂಟಿನರಿ ಸೆನೆಟ್ ಹಾಗೂ ನಾಟು ದರ್ಸ್ ಇದರ ಉದ್ಘಾಟನೆ ಹಾಗೂ ಇಜಾಝತ್ ಕಾರ್ಯಕ್ಕೆ ಇಂಡ್ಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ರವರು ಆಗಮಿಸಲಿದ್ದು, ಪೂರ್ವಭಾವಿಯಾಗಿ ಮರ್ಕಝುಲ್ ಇಸ್ಲಾಮಿಯ್ಯ ಕಣ್ಣೂರಿನಲ್ಲಿ ಸಮಸ್ತ ಸೆಂಟಿನರಿ ಕರ್ನಾಟಕ ಸಮಿತಿ ಅಧ್ಯಕ್ಷರಾದ SP ಹಂಝ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸ್ಥಳೀಯ ಸ್ವಾಗತ ಸಮಿತಿ ರಚಿಸಲಾಯಿತು.

ಸಮಸ್ತ ಸೆಂಟಿನರಿ ಕರ್ನಾಟಕ ಸಮಿತಿ ಕನ್ವೀನರ್ ಅಶ್ರಫ್ ಸಅದಿ ಮಲ್ಲೂರ್ ಸ್ವಾಗತಿಸಿ, ವೈಸ್ ಚೇರ್ಮ್ಯಾನ್ ಡಾ‌. ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಸಭೆಯಲ್ಲಿ ಸಮಸ್ತ ಸೆಂಟಿನರಿ ಕರ್ನಾಟಕ ಎಕ್ಸಿಕ್ಯೂಟಿವ್ ಕೌನ್ಸಿಲ್ ಆಫೀಸ್ ಸೆಕ್ರೆಟರಿ ಸಲೀಂ ಕನ್ಯಾಡಿ ಸಹಿತ ಸುನ್ನೀ ಸಂಘ ಕುಟುಂಬದ ಸ್ಥಳೀಯ ನಾಯಕರು ಹಾಜರಿದ್ದರು. ಬಶೀರ್ ಹಾಜಿ ಪಂಜಿಮೊಗರು ಧನ್ಯವಾದ ಸಮರ್ಪಿಸಿದರು.

ಸ್ಥಳೀಯ ಸ್ವಾಗತ ಸಮಿತಿಯ ಚೆಯರ್ಮ್ಯಾನ್ ಆಗಿ
ಕರೀಂ ಹಾಜಿ KHK, ಜನರಲ್ ಕನ್ವೀನರ್ ಆಗಿ
ನವಾಝ್ ಸಖಾಫಿ ಅಡ್ಯಾರ್ ಪದವು, ಕೋಶಾಧಿಕಾರಿಯಾಗಿ ಸಲಾಂ ಕಣ್ಣೂರ್, ಚೀಫ್ ಕೋ-ಆರ್ಡಿನೇಟರ್ ಆಗಿ ಯಾಕೂಬ್ ಸಅದಿ ನಾವೂರ್, ವೈಸ್ ಚೇರ್ ಮ್ಯಾನ್ ಆಗಿ ಬಾವಾಕ ಕಣ್ಣೂರು, ಸುಲೈಮಾನ್ ಅರಫಾ, ಫಾರೂಕ್ CFC,ಕನ್ವೀನರ್ ಗಳಾಗಿ ಸತ್ತಾರ್ ಸಖಾಫಿ, ಸಯ್ಯದ್ ಇಸ್ಹಾಖ್ ತಂಗಲ್,ಹಸನ್ ಪಾಂಡೇಶ್ವರ,ಆಸಿಫ್ ಸಅದಿ, ಕಾರ್ಯದರ್ಶಿಗಳಾಗಿ ಸುಹೈಲ್ 10ನೇ ಮೈಲ್, ಸಿದ್ದೀಕ್ ಕಾವೂರ್ ಹಾಗೂ 28 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿರಿ...