ದುಬೈ: ಏಷ್ಯನ್ ರಾಷ್ಟ್ರಗಳಲ್ಲಿನ ಕರೆನ್ಸಿ ಮತ್ತು ಬಂಗಾರದ ಬೆಲೆ ಕುಸಿತವು ಗಲ್ಫ್ನಲ್ಲಿ ನೆಲೆಸಿರುವ ಅನಿವಾಸಿಗರ ನಿದ್ರೆ ಕೆಡಿಸಿದೆ. ಊರಿಗೆ ಹಣ ಕಳುಹಿಸಬೇಕೇ ಅಥವಾ ಬಂಗಾರ ಖರೀದಿಸಬೇಕೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.
ಬಂಗಾರಕ್ಕೆ 6ಶೇಕಡಾ ಕುಸಿತವು ಪ್ರಸಕ್ತ ವರ್ಷದಲ್ಲಿ ಕಂಡು ಬಂದಿದೆ.ಈ ಮಧ್ಯೆ ಭಾರತ ಮತ್ತು ಪಾಕಿಸ್ತಾನದ ಕರೆನ್ಸಿಗಳ ಮೌಲ್ಯವು ಬಾರೀ ಕುಸಿತವನ್ನೂ ಕಂಡಿದೆ.
ಒಂದು ದಿರ್ಹಂಗೆ 18.70 ಭಾರತೀಯ ರೂಪಾಯಿ ಲಭಿಸುವ ಅವಸ್ಥೆ ಕೂಡ ಕಂಡುಬಂದಿದ್ದು, ಈ ರೀತಿ ಕುಸಿತವು ಬಂಗಾರ ಮಾರಾಟದಲ್ಲಿ ಪ್ರಭಾವ ಬೀರಲಿದೆ ಎಂದು ಸ್ಕೈ ಜುವೆಲ್ಲರಿಯ ನಿರ್ವಾಹಕ ಸಿರಿಯಕ್ ವರ್ಗೀಸ್ ಹೆಳಿದ್ದಾರೆ. ಅದೇ ವೇಳೆ ಮೌಲ್ಯ ವರ್ಧಿತ ಸೇವೆಯು ಮತ್ತೊಂದು ಸವಾಲಾಗಿ ಪರಿಣಮಿಸಿದೆ.
22 ಕ್ಯಾರೆಟ್ ಬಂಗಾರ ಪ್ರತೀ ಗ್ರಾಂಗೆ 142 ದಿರ್ಹಂ ಕ್ರಯವಿದೆ. ಕಳೆದ ವರ್ಷ ಇದು 150 ದಿರ್ಹಂ ಆಗಿತ್ತು. ಶುಕ್ರವಾರ ದಿನಗಳಲ್ಲಿ ಭಾರೀ ಮಾರಾಟ ನಡೆಯುತ್ತಿರುವುದಾಗಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ಡೈರೆಕ್ಟರ್ ಕೆ.ಪಿ. ಅಬ್ದುಸ್ಸಲಾಂ ಹೇಳಿದರು. ಬಂಗಾರ ಮತ್ತು ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯುವ ಸಂಭವವಿದೆ ಎಂದು ಅನುಮಾನಿಸಲಾಗಿದ್ದು, ಆದರೆ ಅದು ತಾತ್ಕಾಲಿಕವಾಗಿದ್ದು, ದಿಢೀರನೆ ಏರುವ ಸಂಭವವೂ ಇದೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ