ಶಾರ್ಜಾ/ಮಸ್ಕತ್: ಗಲ್ಫ್ ರಾಷ್ಟ್ರಗಳಲ್ಲಿನ ಪ್ರಚಲಿತ ಸಂಘರ್ಷದ ಪರಿಸ್ಥಿತಿಯ ನಡುವೆಯೂ ಅನಿವಾಸಿ ಭಾರತೀಯರಿಗೆ ನಿಮ್ಮಳ ನೀಡುವ ಸುದ್ದಿ ಹೊರಬಿದ್ದಿದೆ. ಯುಎಇಯಿಂದ ಒಮಾನ್ ದೇಶಕ್ಕೆ ಬಸ್ ಸೇವೆಗಳನ್ನು ಆರಂಭಿಸಲಾಗಿದ್ದು, ಪ್ರಯಾಣಿಕರು ಇನ್ನು ಮುಂದೆ ಒಮಾನ್ ಮೂಲಕ ಸಂಚರಿಸಲು ಹಾದಿ ಸುಗಮವಾಗಿದೆ.
ಬಸ್ ಸೇವೆ ಮತ್ತು ಪ್ರಯಾಣದ ಹಾದಿ
ಶಾರ್ಜಾದಿಂದ ಒಮಾನ್ನ ಮಸ್ಕತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಯುಎಇಯಿಂದ ನೇರವಾಗಿ ಭಾರತಕ್ಕೆ ತೆರಳಲು ತೊಂದರೆ ಅನುಭವಿಸುತ್ತಿರುವ ಪ್ರವಾಸಿಗರು ಈಗ ಒಮಾನ್ ತಲುಪಿ ಅಲ್ಲಿಂದ ಸ್ವದೇಶಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳ ಪುನಾರಂಭ
ಒಮಾನ್ನಿಂದ ಭಾರತದ ವಿವಿಧ ನಗರಗಳಿಗೆ ಸ್ಥಗಿತಗೊಂಡಿದ್ದ ವಿಮಾನ ಸಂಚಾರವನ್ನು ನಾಳೆಯಿಂದ (ಮಾರ್ಚ್ 3) ಪುನಾರಂಭಿಸುವುದಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಿಸಿದೆ. ಮಸ್ಕತ್ನಿಂದ ಭಾರತದ ಈ ಕೆಳಗಿನ ಆರು ಪ್ರಮುಖ ನಗರಗಳಿಗೆ ವಿಮಾನಗಳು ಹಾರಾಟ ನಡೆಸಲಿವೆ:
- ಕೊಚ್ಚಿ, ಕೋಝಿಕ್ಕೋಡ್, ಮಂಗಳೂರು, ದೆಹಲಿ, ಮುಂಬೈ ಮತ್ತು ತಿರುಚಿರಾಪಳ್ಳಿ
ವಿಮಾನ ನಿಷೇಧ ಮತ್ತು ಸಡಿಲಿಕೆ
ಯುಎಇ, ಸೌದಿ ಅರೇಬಿಯಾ, ಖತಾರ್, ಕುವೈತ್ ಮತ್ತು ಬಹ್ರೈನ್ ದೇಶಗಳಿಗೆ ವಿಧಿಸಲಾಗಿರುವ ವಿಮಾನ ನಿಷೇಧವು ಮಾರ್ಚ್ 3ರ ಮಧ್ಯರಾತ್ರಿಯವರೆಗೆ ಮುಂದುವರಿಯಲಿದೆ. ಪ್ರಸ್ತುತ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿಮಾನ ಪ್ರಯಾಣ ರದ್ದುಗೊಳಿಸುವವರಿಗೆ ಅಥವಾ ಸಮಯ ಬದಲಾವಣೆ ಮಾಡುವವರಿಗೆ ದಂಡವಿಲ್ಲದೆ ವಿಶೇಷ ರಿಯಾಯಿತಿಗಳನ್ನು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಹೊರ್ಮುಜ್ ದಿಗ್ಬಂಧನ: ‘ಎಡವಟ್ಟು ಮಾಡಬೇಡಿ’- ಅಮೆರಿಕಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ
ಹಜ್ ಸೀಸನ್: ಮಕ್ಕಾ ಪ್ರವೇಶದ ಅನುಮತಿ ಪತ್ರ ವಿತರಣೆ ಆರಂಭ
ಗಲ್ಫ್ ವಲಯದಲ್ಲಿ ಶಾಂತಿಯ ಹೊಸ ಪರ್ವ – ಕದನ ವಿರಾಮ ನಿರ್ಧಾರಕ್ಕೆ ಜಿಸಿಸಿ ಪೂರ್ಣ ಬೆಂಬಲ
ಬಹ್ರೇನ್ ವೈಮಾನಿಕ ಮಾರ್ಗ ಮುಕ್ತ- ವಿಮಾನಯಾನ ಪುನಾರಂಭಕ್ಕೆ ಹಸಿರು ನಿಶಾನೆ
ದಾಳಿಯ ಭೀತಿ: ಸೌದಿ-ಬಹ್ರೇನ್ ‘ಕಾಸ್ವೇ’ ಬಂದ್- ಸಂಚಾರ ಸಂಪೂರ್ಣ ಸ್ಥಗಿತ
ಸೌದಿ ಅರೇಬಿಯಾ: ಇನ್ನೂ 69 ಹುದ್ದೆಗಳಲ್ಲಿ ಶೇ.100 ಸ್ವದೇಶೀಕರಣ ಜಾರಿ
ಸೌದಿ: ನಾಳೆಯಿಂದ ಭಾರಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ
ಇರಾನ್ ದಾಳಿ; ವಿಶ್ವದ ಅತಿದೊಡ್ಡ ‘ಎಮಿರೇಟ್ಸ್ ಗ್ಲೋಬಲ್ ಅಲ್ಯೂಮಿನಿಯಂ’ ಕಾರ್ಯಾಚರಣೆ ಸ್ಥಗಿತ
ಹಜ್-ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಪವಿತ್ರ ಮಕ್ಕಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ
ಚಾಲನೆ ವೇಳೆ ತಿಂಡಿ ಮತ್ತು ಮೇಕಪ್ಗೆ ಬ್ರೇಕ್- ಸೌದಿ ಸಂಚಾರಿ ವಿಭಾಗದ ಕಟ್ಟುನಿಟ್ಟಿನ ಸೂಚನೆ