janadhvani

Kannada Online News Paper

ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ಕಜ ಬಪ್ಪಿಞ ಉಪ್ಪಾಪ ಕುಟುಂಬದ FAMILY MEET -2025

ಹೊಸಂಗಡಿ: ಯಾರಾದರೂ ಅಲ್ಲಾಹನಲ್ಲಿ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿಡುತ್ತಾನೋ ಅವನು ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸಲಿ ಎಂಬ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ವಚನದಂತೆ ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಪ್ರತಿಷ್ಠಿತ ಕಜ ಬಪ್ಪಿಞ ಕುಟುಂಬದ ವತಿಯಿಂದ ಆಯೋಜಿಸಿದ FAMILY MEET -2025 ಏಪ್ರಿಲ್ 13 2025 ರಂದು ಹೊಸಂಗಡಿ ಸಮೀಪದ ಮಂಜೇಶ್ವರ ಬಳಿ ಇರುವ AMAN COTTAGE BEACH VIEW HALL ನಲ್ಲಿ ನಡೆಯಿತು.

ಕಾರ್ಯಕ್ರಮವು ಬೆಳಿಗ್ಗೆ 9:30ರಿಂದ ಸಂಜೆ 6:30 ತನಕ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಅಗಲಿದ ಕುಟುಂಬ ಸದಸ್ಯರ ಹೆಸರಿನಲ್ಲಿ ಯಾಸಿನ್ ಪಾರಾಯಣ ನಡೆಸಿ ಪ್ರಾರ್ಥನೆ ನೆರವೇರಿಸಲಾಯಿತು. ನಂತರ ಕುಟುಂಬ ಸದಸ್ಯರಾದ ಪುರುಷರು, ಮಹಿಳೆಯರು ಮತ್ತು ಮಕ್ಕಳ ಪ್ರತ್ಯೇಕ ವಿಭಾಗಗಳಾಗಿ ವರ್ಗೀಕರಿಸಿ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಮಧ್ಯಾಹ್ನದ ಊಟದ ನಂತರ ಸಭಾ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಅಬ್ದುಲ್ ಖಾದರ್ ನಿಮಾನ್ ಕಿರಾಅತ್ ಪಠಿಸಿದರು. ನಂತರ ಹಸೀದ್ ಕುರ್ನಾಡ್ ಕುಟುಂಬ ಸದಸ್ಯರನ್ನು ಸ್ವಾಗತಿಸಿ ಕುಟುಂಬದ ಪರಿಚಯವನ್ನು ನಡೆಸಿಕೊಟ್ಟರು. ನಂತರ ಕುಟುಂಬದ ಹಿರಿಯರಾದ ಉಪ್ಪಾ ಪನವರ 3 ಮಕ್ಕಳನ್ನು ಹಾಗೂ 3 ಸೊಸೆಯಂದಿರನ್ನು ಸನ್ಮಾನಿಸಲಾಯಿತು. ನಂತರ 39 ಮೊಮ್ಮಕ್ಕಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಕುಟುಂಬ ಸದಸ್ಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವು ನಡೆಯಿತು. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ಗೆ ಆಯ್ಕೆ ಯಾದ ನಮ್ಮ ಕುಟುಂಬದ ಸದಸ್ಯರಾದ ಡಾI ಅಬೂಬಕರ್ ಸಿದ್ದೀಕ್ ಕುರ್ನಾಡು ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮೂಸ ಕುಂಞ ಹಾಜಿ ಸಂಬಾರತೋಟ ಇವರಿಗೆ ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಉದ್ಯಮ ಕ್ಷೇತ್ರದ ಸಾಧನೆಗಾಗಿ ಕುಟುಂಬದ ಮೂವರು ಸದಸ್ಯರಾದ ಜಂಬೋ ಅಬ್ದುಲ್ ಖಾದರ್ ಕಾಯರ್ಕಟ್ಟ, ಬದ್ರುದ್ದೀನ್ ಹೊಸಂಗಡಿ, ಸಿರಾಜ್ ಮನ್ನಮ್ ಕುಝಿ ಇವರನ್ನು ಬಿಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಕೆ. ಎಸ್. ಸಾದು ಕುಂಞ ಹಾಜಿ ಸಾಗ್ ಬಾಗ್, ನಿವೃತ್ತ ಸಹಾಯಕ ಅಧಿಕಾರಿ, ಕೃಷಿ ಇಲಾಖೆ, ಕರ್ನಾಟಕ ಸರ್ಕಾರ ಇವರಿಗೆ ಪ್ರೊಫೆಷನಲ್ ಅಚೀವ್ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಳಿದಂತೆ ವಿವಿಧ ವೃತ್ತಿಪರ ಶಿಕ್ಷಣ ಮುಗಿಸಿ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 15 ಸದಸ್ಯರನ್ನು ಪ್ರೊಫೆಷನಲ್ ಆಚೀವ್ಮೆಂಟ್ ಅವಾರ್ಡ್ ನೀಡಿ ಪುರಸ್ಕರಿಸಲಾಯಿತು.

ಎಸ್.ಎಸ್.ಎಲ್. ಸಿ. , ಪಿ. ಯು. ಸಿ, ಮದ್ರಸದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸ್ಮರಣಿಕೆ ಹಾಗೂ ಸರ್ಟಿಫಿಕೆಟ್ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಲಕ್ಕಿ ಡ್ರಾ ಮೂಲಕ ಆಯ್ಕೆಯಾದ ಕುಟುಂಬದ ಮೂವರು ಅದೃಷ್ಟವಂತ ಸದಸ್ಯರಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕುಟುಂಬದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ
ಕನ್ವೀನರ್ ಗಳಾಗಿ ಬದ್ರುದ್ದೀನ್ ಹೊಸಂಗಡಿ ಮತ್ತು ಹಸೀದ್ ಕುರ್ನಾಡು ಕಾರ್ಯನಿರ್ವಹಿಸಿದರು.

ಫಾತಿಮ ಸಾದಿಕ ಸಫ ವಿವಿಧ ಸ್ಪರ್ಧೆಗಳನ್ನು ನಡೆಸಿ ಕಾರ್ಯಕ್ರಮವನ್ನು ನಿರೂಪಿಸಿದರು.