janadhvani

Kannada Online News Paper

ವಕ್ಫ್ ತಿದ್ದುಪಡಿ ವಿರುದ್ಧ ಏಪ್ರಿಲ್ 18 ರ ಪ್ರತಿಭಟನಾ ಸಮಾವೇಶ- ಮುಸ್ಲಿಮ್ ಒಕ್ಕೂಟ ಬೆಂಬಲ

ಮಂಗಳೂರು: ಕೇಂದ್ರ ಸರ್ಕಾರದ ಕರಾಳ ವಕ್ಫ್ ತಿದ್ದುಪಡಿ ಕಾಯಿದೆ ಅನುಷ್ಠಾನವನ್ನು ವಿರೋಧಿಸಿ ಕರ್ನಾಟಕ ಉಲಮಾ ಕೋ- ಆರ್ಡಿನೇಷನ್ ಕಮಿಟಿಯು ದ.ಕ.ಜಿಲ್ಲಾ ಮಟ್ಟದ ಉನ್ನತ ಖಾಝಿಗಳ ನೇತೃತ್ವದಲ್ಲಿ ತಾರೀಕು 18 ಏಪ್ರಿಲ್ ರಂದು ಸಂಜೆ 03.00 ಗಂಟೆಗೆ ಅಡ್ಯಾರ್ ನಲ್ಲಿನ ಷಾ ಗಾರ್ಡ ನ್ ನಲ್ಲಿ ಆಯೋಜಿಲಾದ ಪ್ರತಿಭಟನಾ ಸಮಾವೇಶಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಂಪೂರ್ಣ ಬೆಂಬಲ ಸೂಚಿಸಿದೆ.

ಆಯೋಜಿಸಲಾದ ಈ ಪ್ರತಿಭಟನಾ ಸಮಾವೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್( ಮಾಜಿ ಮೇಯರ್)ಕರೆ ನೀಡಿದ್ದಾರೆ.