janadhvani

Kannada Online News Paper

ಎ:18 ರ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಎಸ್ ವೈ.ಎಸ್ ದ.ಕ ಜಿಲ್ಲಾ (ವೆಸ್ಟ್) ಸಮಿತಿ ಕರೆ

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಖ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ಎಪ್ರಿಲ್ 18 ರಂದು ಶುಕ್ರವಾರ ಸಂಜೆ 3:00 ಗಂಟೆಗೆ ಅಡ್ಯಾರ್ ಶಾ ಗಾರ್ಡನ್ ನಲ್ಲಿ ಕರ್ನಾಟಕ ಉಲಮಾ ಕೋಡಿನೇಶನ್ ನಡೆಸುವ ಪ್ರತಿಭಟನೆಯನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಬೇಕೆಂದು ಎಸ್‌ವೈಎಸ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಕರೆ ನೀಡಿದರು.

ಉಲಮಾ ಕೋಡಿನೇಶನ್ ನಾಯಕರ ಜತೆ ಪ್ರತಿಭಟನಾ ಗ್ರೌಂಡ್ ವಿಸಿಟ್ ಮಾಡುತ್ತಾ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ, ತೌಸೀಪ್ ಸಅದಿ ಹರೇಕಳ,ಮುತ್ತಲಿಬ್ ವೇಣೂರು,ಹಸನ್ ಪಾಂಡೇಶ್ವರ,ನವಾಝ್ ಸಖಾಫಿ ಅಡ್ಯಾರ್ ,ನಝೀರ್ ಹಾಜಿ ಲುಲು ಮಂಗಳೂರು, ಯಾಕೂಬ್ ಸಅದಿ ನಾವೂರುಇನ್ನಿತರರು ಉಪಸ್ಥಿತರಿದ್ದರು.