ಮಲಪ್ಪುರಂ | ಖ್ಯಾತ ವಿದ್ವಾಂಸ ಮತ್ತು ಧಾರ್ಮಿಕ ಭಾಷಣಗಾರರಾದ ಹಾಫಿಳ್ ಮಸ್ಊದ್ ಸಖಾಫಿ ಗೂಡಲ್ಲೂರು(41) ನಿಧನರಾದರು. ಅವರು ಇಂದು ಬೆಳಿಗ್ಗೆ ಕಿಝಿಶ್ಶೇರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಸ್ಊದ್ ಸಖಾಫಿ ಒಬ್ಬ ಯುವ ಧರ್ಮೋಪದೇಶಕರಾಗಿದ್ದರು, ಅವರು ತಮ್ಮ ವಿಶಿಷ್ಟ ಶೈಲಿಯ ಧಾರ್ಮಿಕ ಉಪದೇಶದಿಂದ ಸಾವಿರಾರು ಜನ ಹೃದಯಗಳನ್ನು ಗೆದ್ದಿದ್ದರು. ಕೇರಳ ಮಾತ್ರವಲ್ಲದೇ, ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅವರು ಉಪನ್ಯಾಸ ವೇದಿಕೆಗಳನ್ನು ತುಂಬುತ್ತಿದ್ದರು.
ಅವರು ಚಿಕ್ಕ ವಯಸ್ಸಿನಲ್ಲಿಯೇ ಪವಿತ್ರ ಕುರ್ಆನ್ ಅನ್ನು ಕಂಠಪಾಠ ಮಾಡಿದ ಹಾಫಿಝ್ ಕೂಡ ಆಗಿದ್ದರು ಮತ್ತು ಅದನ್ನು ತಮ್ಮ ನೆನಪಿನಲ್ಲಿ ಎಚ್ಚರಿಕೆಯಿಂದ ಸಂರಕ್ಷಿಸಿದ್ದರು. ನಿನ್ನೆ ರಾತ್ರಿ ಉಪನ್ಯಾಸ ನೀಡಿ ಮನೆಗೆ ಮರಳಿದ್ದ ಅವರು ಇಂದು ಕಾಸರಗೋಡು ಜಿಲ್ಲೆಗೆ ಉಪನ್ಯಾಸ ನೀಡಲು ಹೋಗಲು ಯೋಜಿಸುತ್ತಿದ್ದರು. ಅವರು ಕರ್ಮದ ಹಾದಿಯಲ್ಲಿ ಇನ್ನೂ ಸಕ್ರಿಯರಾಗಿದ್ದಾಗಲೇ, ಅಲ್ಲಾಹನ ಕರೆಗೆ ಓಗೊಟ್ಟು ಪ್ರಯಾಣ ಬೆಳೆಸಿದರು.
ತಮ್ಮ ಸ್ಥಳೀಯ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಒರವಂಬ್ರಾ ಹಿಫ್ಳುಲ್ ಖುರ್ಆನ್ ಕಾಲೇಜಿನಿಂದ ಖುರ್ಆನ್ ಅನ್ನು ಕಂಠಪಾಠ ಮಾಡಿದರು. ಎಡವನ್ನಪ್ಪಾರ ದಾರುಲ್ ಅಮಾನ್ ನಲ್ಲಿ ಟಿ.ಸಿ.ಮುಹಮ್ಮದ್ ಮುಸ್ಲಿಯಾರ್,ತರಯಿಟ್ಟಾಲ್ ಹಸನ್ ಸಖಾಫಿ, ಕಾರಿ ಊರಗಂ ಅಬ್ದುರಹ್ಮಾನ್ ಸಖಾಫಿ, ಶಾಫಿ ಸಖಾಫಿ ಮುಂಡಂಬ್ರ, ಮತ್ತು ಲುಕ್ಕಾನುಲ್ ಹಕೀಮ್ ಸಖಾಫಿ ಪುಲ್ಲಾರ ಅವರ ಬಳಿ ಆರು ವರ್ಷಗಳ ಕಾಲ ಅಧ್ಯಯನ ಮಾಡಿದರು. ನಂತರ, ಅವರು ಮರ್ಹೂಂ ಕಾಂತಪುರಂ ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಅವರ ಬಳಿ ಅಝೀಝಿಯಾದಲ್ಲಿ ಎರಡು ವರ್ಷಗಳ ಕಾಲ ದರ್ಸ್ ಅಧ್ಯಯನ ಮಾಡಿದರು. ನಂತರ, ಕಾರಂದೂರು ಮರ್ಕಝ್ ನಿಂದ ಸಖಾಫಿ ಪದವಿ ಪಡೆದರು.
ಅವರು ಅಝೀಝಿಯಾ ಕಾಂತಪುರಂ, ಕಡುಂಗಲ್ಲೂರ್ ಚೆರಪ್ಪಾಲಂ ಮತ್ತು ಕಕ್ಕಾಡ್ ಸರ್ಕಾರ್ ಪರಂಬ್ ಎಂಬಲ್ಲಿ ದರ್ಸ್ ರಂಗದಲ್ಲಿ ಸೇವೆಗೈದರು. ಪ್ರಸ್ತುತ ಚೆಮ್ಮಾಡ್ ಸಿ.ಕೆ. ನಗರದಲ್ಲಿ ದರ್ಸ್ ನಡೆಸುತ್ತಿದ್ದರು. ದೀರ್ಘ ಕಾಲ, ಕಿಝಿಶ್ಶೇರಿ ಕಡುಂಗಲ್ಲೂರು ಚೆರಪ್ಪಾಲಂನಲ್ಲಿ ದರ್ಸ್ ನಡೆಸುತ್ತಿದ್ದರಿಂದ ಅವರು ಚೆರಪ್ಪಾಲಂ ಸಮೀಪದ ಪುಳಿಯಕೋಟ್ ಮೇಲ್ಮುರಿಯಲ್ಲಿ ವಾಸಿಸುತ್ತಿದ್ದರು.
ಸುಲ್ತಾನುಲ್ ಉಲಮಾ ಕಾಂತಪುರಂ ಎ. ಪಿ. ಅಬೂಬಕ್ಕಲ್ ಮುಸ್ಲಿಯಾರ್, ಎಂ. ಎಂ. ಅಬ್ದುಲ್ಲಾಹ್ ಮುಸ್ಲಿಯಾರ್, ನೆಲ್ಲಿಕುತ್ತು ಇಸ್ಮಾಯಿಲ್ ಮುಸ್ಲಿಯಾರ್,ವಾಳಕ್ಕುಳಂ ವೀರಾನ್ಕುಟ್ಟಿ ಮುಸ್ಲಿಯಾರ್, ಎಡಕ್ಕುಳಂ ಲತೀಫ್ ಮುಸ್ಲಿಯಾರ್, ಮತ್ತು ಪಡನಿಲಂ ಹುಸೈನ್ ಮುಸ್ಲಿಯಾರ್ ಮುಂತಾದವರು ಪ್ರಮುಖ ಶಿಕ್ಷಕರು.
ಗೂಡಲ್ಲೂರು ಬಳಿಯ ಪೆರಿಯಶೋಲ ಮೂನ್ನಾಂತೋಡಿಗ ನಿವಾಸಿ ಅಬ್ದುಲ್ ಕರೀಮ್ ಅವರ ಪುತ್ರರಾಗಿದ್ದಾರೆ 41 ವರ್ಷದ ಹಾಫಿಳ್ ಮಸ್ಊದ್ ಸಖಾಫಿ. ಪತ್ನಿ: ರಮೀಝಾ ಗೂಡಲ್ಲೂರು. ಮಕ್ಕಳು: ಅಬ್ದುಲ್ಲಾಹ್ ಉವೈಸ್, ಅಬ್ದುಲ್ಲಾಹ್ ಲಬೀಬ್ ಮತ್ತು ಫಾತಿಮಾ ದಿಶ್ನಾ. ಒಡಹುಟ್ಟಿದವರು: ಝೈನುಲ್ ಆಬಿದೀನ್ ಅಹ್ಸನಿ ಓಮಶ್ಶೇರಿ, ಶಿಹಾಬುದ್ದೀನ್ ಇರ್ಫಾನಿ ತ್ರಿಶೂರ್, ಖದೀಜಾ, ಝುಬೈಬಾ, ಹಫ್ಸ, ಅತಿಕಾ, ಮತ್ತು ಸೌದಾ.
ಇಂದು (23-02-25, ಭಾನುವಾರ) ಮಧ್ಯಾಹ್ನ 2 ಗಂಟೆಗೆ ಪುಳಿಯಕ್ಕೋಡ್ ಮೇಲ್ಮುರಿ ಸುನ್ನಿ ಸೆಂಟರ್ ಮಸ್ಟಿದುಲ್ ಫೌಜ್ನಲ್ಲಿ ಜನಾಝ ನಮಾಜ್ ನಡೆಯಲಿದೆ. ಸಂಜೆ 4 ಗಂಟೆಗೆ ವಝಿಕಡವ್ ಕೆಟ್ಟುಂಗಲ್ ಜುಮಾ ಮಸೀದಿಯಲ್ಲಿ ಜನಾಝ ನಮಾಜ್ ಮತ್ತು ದಫನ ಕಾರ್ಯ ನಡೆಯಲಿದೆ.
ನೂರಾರು ಮಧ್ಯರಾತ್ರಿಗಳನ್ನು ಆಧ್ಯಾತ್ಮಿಕ ಉಪದೇಶ ಮತ್ತು ಪ್ರಾರ್ಥನೆಯಿಂದ ಸಮೃದ್ಧಗೊಳಿಸಿದ ಮತ್ತು ಸಾವಿರಾರು ಹೃದಯಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಜಾಗೃತಗೊಳಿಸಿದ ಅವರ ಎಲ್ಲಾ ಕಾರ್ಯಗಳನ್ನು ಅಲ್ಲಾಹನು ಸ್ವೀಕರಿಸಲಿ! ಅಲ್ಲಾಹನು ಈ ಸಮುದಾಯಕ್ಕೆ ವಿದ್ವಾಂಸರನ್ನು ಬದಲಿಯಾಗಿ ನೀಡಲಿ!
















ಇನ್ನಷ್ಟು ಸುದ್ದಿಗಳು
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ