janadhvani

Kannada Online News Paper

ಬೆಂಗಳೂರು ಸಂಯುಕ್ತ ಜಮಾಅತ್ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ.ಉಸ್ತಾದ್

ಬೆಂಗಳೂರು: ದಕ್ಷಿಣ ಕನ್ನಡ,ಕೊಡಗು,ಶಿವಮೊಗ್ಗ ಜಿಲ್ಲೆಗಳ ಸಹಿತ ಹಲವಾರು ಮೊಹಲ್ಲಾಗಳ ಖಾಝಿಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಬೆಂಗಳೂರು ಸಂಯುಕ್ತ ಜಮಾಅತ್ ಖಾಝಿಯಾಗಿ ಜವಾಬ್ದಾರಿ ವಹಿಸಿಕೊಂಡರು.

ತ್ಯಾನರಿ ರಸ್ತೆ ಕೆ.ಜಿ ಹಳ್ಳಿ ಸಿ.ಎಂ.ಎ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸಯ್ಯದ್ ಕೂರ ತಂಗಳರ ಅನುಸ್ಮರಣಾ ಕಾರ್ಯಕ್ರಮದಲ್ಲಾಗಿತ್ತು ಉಸ್ತಾದರು ಖಾಝಿಯಾಗಿ ಅಧಿಕಾರ ವಹಿಸಿಕೊಂಡದ್ದು.

ವಯನಾಡಿನಲ್ಲಿ ನಡೆದ ಪ್ರಕೃತಿ ದುರಂತದ ಬಗ್ಗೆ ಖೇದ ವ್ಯಕ್ತಪಡಿಸಿದ ಎ.ಪಿ ಉಸ್ತಾದ್ ಅಲ್ಲಿನ ದುರಂತದ ನಷ್ಟವು ಊಹಿಸಲು ಅಸಾಧ್ಯವಾಗಿದೆ.ಅಲ್ಲಿನ ನಿರಾಶ್ರಿತರಿಗೆ ಕೈಲಾಗುವ ಸಹಾಯ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮ ದಲ್ಲಿ ಬೆಂಗಳೂರು,ಮೈಸೂರು,ಕೆ.ಜಿ.ಎಫ್,ಹೊಸೂರು,ರಾಮನಗರ,ತುಮಕೂರು ಮೊದಲಾದ 50ಕ್ಕೂ ಮಿಕ್ಕ ಮೊಹಲ್ಲಾಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಎನ್.ಕೆ.ಎಂ. ಶಾಫಿ ಸ‌ಅದಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯದ್ ಇಬ್ರಾಹಿಂ ಬಾಫಖಿ ತಂಗಳ್ ದುಆದೊಂದಿಗೆ ಚಾಲನೆ ನೀಡಿ ,ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಉದ್ಘಾಟಿಸಿದರು.

ಬಳಿಕ ಹುಸೈನ್ ಸಖಾಫಿ ಚುಳ್ಳಿಕೋಡ್ ,ಸಯ್ಯದ್ ತನ್ವೀರ್ ಹಾಶಿಮಿ ಬಿಜಾಪುರ,ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಸುಫಿಯಾನ್ ಮದನಿ,ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಹಫೀಳ್ ಸ‌ಅದಿ,ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ,ಮುಸ್ಲಿಂ ಜಮಾ‌ಅತ್ ಜಿಲ್ಲಾಧ್ಯಕ್ಷ ಶಬೀರ್ ಹಝ್ರತ್,ಉರ್ದು ಅಕಾಡಮಿ ಚೇರ್ಮಾನ್ ಮೌಲಾನ ಮುಹಮ್ಮದಲಿ ಖಾಝಿ ಮೊದಲಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು .

ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಚೇರ್ಮಾನ್ ಅನ್ವರ್ ಪಾಷಾ,ಯೂ.ಟಿ.ಇಫ್ತಿಕಾರ್,ಮಾಜಿ ಸಚಿವ ರೋಷನ್ ಬೇಗ್,ನಾಸರ್ ಅಹ್ಮದ್ ಎಂ.ಎಲ್.ಸಿ, ಜಿ.ಎ.ಬಾವ,ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಪಿ.ಎಂ.ಎಚ್.ಅಬ್ದುಲ್ ಹಮೀದ್ ಅಬುದಾಬಿ,ಸಲ್ಮಾನ್ ಪ್ರೆಸಿಡೆನ್ಸಿ, ಸಿ.ಎಂ ಫಾಯಿಝ್,ರಿಯಾಝ್ ಸುಲ್ತಾನ್ ಗೋಲ್ಡ್ ಮೊದಲಾದ ಧಾರ್ಮಿಕ,ಸಾಮಾಜಿಕ,ರಾಜಕೀಯ ನೇತಾರರು ಭಾಗವಹಿಸಿದ್ದರು.ಅನಸ್ ಸಿದ್ದೀಖಿ ಸ್ವಾಗತಿಸಿ ಹಾಗೂ ಅಬ್ದುಲ್ ರಹ್‌ಮಾನ್ ಹಾಜಿ ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com