janadhvani

Kannada Online News Paper

ಬಾವಿಗೆ ಬಿದ್ದ ಬೆಕ್ಕು : ರಕ್ಷಣೆಗಿಳಿದ ಐವರು ಸಹೋದರರು ಉಸಿರುಗಟ್ಟಿ ಸಾವು

ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಯತ್ನದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರದ ವಕಾಡಿಯಲ್ಲಿ ಈ ಘಟನೆ ನಡೆದಿದೆ. ಬೆಕ್ಕು ಬಾವಿಗೆ ಬೀಳುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬ ಅದನ್ನು ರಕ್ಷಿಸಲು ಬಾವಿಯೊಳಗೆ ಇಳಿದನು . ಶಬ್ದ ಕೇಳದಿದ್ದಾಗ ಇನ್ನೂ ಐವರು ಸಹೋದರರು ಬಾವಿಗೆ ಇಳಿದರು.
ಅವರಲ್ಲಿ ಒಬ್ಬರ ಕೂಗು ಕೇಳಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದರು . ಕೂಡಲೇ ಅಗ್ನಿಶಾಮಕ ದಳವೂ ಸ್ಥಳಕ್ಕೆ ಆಗಮಿಸಿತು. ಪೊಲೀಸರು ಹಾಗೂ ಅಗ್ನಿಶಾಮಕ ದಳ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಬಾವಿಗೆ ಇಳಿದ ಒಬ್ಬರನ್ನು ಮಾತ್ರ ಜೀವಂತವಾಗಿ ಹೊರ ತರಲು ಸಾಧ್ಯವಾಯಿತು.
ಐದು ಗಂಟೆಗಳ ಪ್ರಯತ್ನದ ನಂತರ ಐವರ ಮೃತದೇಹಗಳನ್ನು ಹೊರತೆಗೆಯಲಾಯಿತು.

error: Content is protected !! Not allowed copy content from janadhvani.com