janadhvani

Kannada Online News Paper

ಸಿಎಎ ನಿಯಮಗಳ ಪ್ರಕಟಣೆ ತಡೆಹಿಡಿಯಬೇಕು- ಮುಸ್ಲಿಂ ಲೀಗ್ ಮತ್ತೆ ಸುಪ್ರೀಂ ಕೋರ್ಟ್‌ಗೆ

ತಿರುವನಂತಪುರಂ | ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ವಿರುದ್ಧ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ. ಸಿಎಎ ನಿಯಮಗಳನ್ನು ಪ್ರಕಟಿಸುವ ಪ್ರಕ್ರಿಯೆಗೆ ತಡೆ ಕೋರಿ ಇಂದೇ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲು ನಿರ್ಧರಿಸಲಾಗಿದೆ.

ಮುಸ್ಲಿಂ ಲೀಗ್ ಮುಖಂಡರಾದ ಪಿ.ಕೆ.ಕುಞ್ಞಾಲಿಕುಟ್ಟಿ ಪ್ರತಿಜ್ಞಾವಿಧಿಗೆ ಸಹಿ ಹಾಕಿದರು. ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಪ್ರಮುಖ ಅರ್ಜಿದಾರ ಮುಸ್ಲಿಂ ಲೀಗ್ ಆಗಿದೆ.

ಸಿಎಎ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ

ಏತನ್ಮಧ್ಯೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಡಿವೈಎಫ್‌ಐ ಬಲವಾಗಿ ಪ್ರತಿಭಟಿಸಲಿದೆ ಎಂದು ಸಂಸದ ಎಎ ರಹೀಮ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನಕ್ಕೆ ಸವಾಲಾಗಿದ್ದು, ಡಿವೈಎಫ್‌ಐ ಸುಪ್ರೀಂ ಕೋರ್ಟ್‌ ಮೊರೆ ಹೋಗಲಿದೆ ಎಂದು ಎಎ ರಹೀಮ್ ಹೇಳಿದ್ದಾರೆ. ಕಾನೂನು ತಜ್ಞರ ನೆರವು ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿರಿ...