janadhvani

Kannada Online News Paper

ಕೊಡಂಗಾಯಿ ಸುನ್ನೀ ಸೆಂಟರ್- ನೂತನ ಮಸ್ಜಿದ್ ಉದ್ಘಾಟನೆ ನಾಳೆ

ವಿಟ್ಲ: ಸುನ್ನೀ ಸೆಂಟರ್ ಕೊಡಂಗಾಯಿ ಇದರ ನೂತನ ಮಸ್ಜಿದ್ ಉದ್ಘಾಟನೆ ಫೆಬ್ರವರಿ 15 ಗುರುವಾರ ನಾಳೆ ಸಾಯಂಕಾಲ 4:00 ಗಂಟೆಗೆ ಸರಿಯಾಗಿ ಸಮಸ್ತ ಕೇರಳ ಜಂಇಯತುಲ್ ಉಲಮಾ ಉಪಾಧ್ಯಕ್ಷರಾದ ಕುಂಬೋಳ್ ಸೈಯದ್ ಆಟಕೋಯ ತಂಙಳ್ ರವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈಖುನಾ ವಾಲೆಮುಂಡೋವ್ ಉಸ್ತಾದ್ ನಿರ್ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸೈಯದ್ ಇಬ್ರಾಹಿಂ ಪುಕುಂಞ್ಞ ತಂಙಳ್ ,ಸಯ್ಯಿದ್ ಶಿಹಾಬುದ್ದೀನ್ ತಂಙಳ್ , ಸಯ್ಯಿದ್ ಶಮೀಮ್ ತಂಙಳ್ ದಾರುನ್ನಜಾತ್ ಅಸ್ಲಂ ಹಾಜಿ ಮುಹಮ್ಮದ್ ಮುಸ್ಲಿಯಾರ್ ಇಮಾಂ ದುಬೈ,ಕನ್ಯಾನ ಇಬ್ರಾಹಿಂ ಮುಸ್ಲಿಯರ್ ,ಸಿರಾಜುದ್ದೀನ್ ಸಖಾಫಿ ಮತ್ತು
ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ್ .ರವೀಶ್ ಶೆಟ್ಟಿ ಕಾರ್ಕಳ ಎಂ ಎಸ್ ಮುಹಮ್ಮದ್ ನಾಗೇಶ್ ಶೆಟ್ಟಿ ಸಂದೇಶ್ ಶೆಟ್ಟಿ ಹಾಗೂ ಹಲವು ಸಾಮಾಜಿಕ ಧಾರ್ಮಿಕ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಲಿದೆ.ಆದ್ದರಿಂದ ಈ ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಸುನ್ನಿ ಸೆಂಟರ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ತಿಳಿಸಿದ್ದಾರೆ.

______________________________

error: Content is protected !! Not allowed copy content from janadhvani.com