ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾ ದ ದಮ್ಮಾಮ್ ನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡ ತಮಿಳುನಾಡು ಮೂಲದ ವ್ಯಕ್ತಿಯನ್ನು ಟ್ರಾಫಿಕ್ ಪೊಲೀಸರು ದಮ್ಮಾಮ್ ಮುವಾಸತ್ ಆಸ್ಪತ್ರೆಗೆ ದಾಖಲಿಸಿದ್ದರು. ಇವರ ಎರಡೂ ಕಾಲುಗಳು ಮತ್ತು ಸೊಂಟ ಮುರಿತಕ್ಕೊಳಗಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ತುಂಬಾ ಬಿಲ್ ಬೇಕಾಗಿದ್ದು ಇನ್ಶೂರೆನ್ಸ್ ಕೂಡ ಸರಿ ಇಲ್ಲದ ಕಾರಣ ಮೊತ್ತವನ್ನು ಭರಿಸಲು ಅಶಕ್ತರಾಗಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಊರಿಗೆ ಕಳುಹಿಸಬೇಕಾಗಿ ನಾರ್ತ್ ಸೆಕ್ಟರ್ ಗೆ ಬಂದ ಕೋರಿಕೆಯನ್ನು ಪರಿಶೀಲಿಸಿ ಸೆಕ್ಟರ್ ಸಾಂತ್ವನ ವಿಭಾಗವು ಕೂಡಲೇ ಕಾರ್ಯಪ್ರವರ್ತರಾಗಿ ಝೋನ್ ಸಾಂತ್ವನ ವಿಭಾಗದ ಸಹಕಾರದೊಂದಿಗೆ ಸ್ಟ್ರಕ್ಚರ್ ಮುಖಾಂತರ ದಮ್ಮಾಮ್ ನಿಂದ ತಿರುವನಂತಪುರಕ್ಕೆ ,ಅಲ್ಲಿಂದ ಅವರ ಊರಿಗೆ ಆಂಬುಲನ್ಸ್ ಮೂಲಕ ತಲುಪಿಸುವ ಸಾಂತ್ವನ ಕಾರ್ಯವನ್ನು ಭಾರತೀಯ ರಾಯಭಾರಿ, ಆಸ್ಪತ್ರೆಯ ಹಾಗು ಸೌದಿ ಸರಕಾರದ ಪ್ರತೀ ನಿಯಮಗಳನ್ನು ಪಾಲಿಸಿ ಬಹಳ ಅಚ್ಚುಕಟ್ಟಾಗಿ ಸಮಯಕ್ಕನುಸಾರ ಯಾವುದೇ ತೊಂದರೆಗಳಲ್ಲಿದೆ ದಮ್ಮಾಮ್ ನಾರ್ತ್ ಸೆಕ್ಟರ್ ಮುಖಾಂತರ ವ್ಯವಸ್ಥೆಮಾಡಿ ಕೊಡಲಾಯಿತು.
ಈ ಒಂದು ಕಾರ್ಯಾಚರಣೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF ) ದಮ್ಮಾಮ್ ಝೋನ್ ಸಾಂತ್ವನ ವಿಭಾಗದ ಚೇರ್ಮಾನ್ ಬಾಷಾ ಗಂಗಾವಳಿ, ಪ್ರ. ಕಾರ್ಯದರ್ಶಿ ತಮೀಮ್ ಕೂಳುರು, ಸೆಕ್ಟರ್ ಸಾಂತ್ವನ ವಿಭಾಗದ ಚೇರ್ಮಾನ್ ಫಾರುಕ್ ಕಾಪು ಹಾಗು ಕನ್ವೀನರ್ ಅಫೀಫ್ ಕಾಟಿಪಳ್ಳ ಇವರುಗಳಿಗೆ ಹೃತ್ಪೂರ್ವಕ ಕ್ರತಜೃತೆಯನ್ನು ರಾಜುವಿನ ಕುಟುಂಬದವರು ಹಾಗು ಸ್ನೇಹಿತರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ