ಬುರೈದಾ, ಜನನರಿ 24 : ಮಂಗಳೂರು ತಾಲೂಕಿನ ಮಂಜನಾಡಿಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ವಿದ್ಯಾ ಸಮುಚ್ಚಯ ಅಲ್ ಮದೀನಾ ಎಜುಕೇಶನಲ್ ಸೆಂಟರ್ ಇದರ 30 ನೇ ವಾರ್ಷಿಕೋತ್ಸವದ ಪ್ರಚಾರಾರ್ಥ ಹಮ್ಮಿಕೊಂಡ “ದ 30 ಹ್ಯಾಪನ್ಸ್” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಲ್ ಮದೀನಾ ಮಂಜನಾಡಿ ಇದರ ಸಾರಥಿ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಸುಪುತ್ರ ಮುಹಮ್ಮದ್ ಕುಂಞ ಅಮ್ಜದಿ ಅಲ್ ಅರ್ಷದಿ ಈ ಬಗ್ಗೆ ಪ್ರಸ್ತಾವಿಸಿದರು.
ವೈಜ್ಞಾನಿಕ ,ವಿದ್ಯಾ ರಂಗದಲ್ಲಿ ಮುನ್ನುಗ್ಗುತ್ತಾ ಸಮೀಪ ಕಾಲದಲ್ಲಿ ಕರಾವಳಿಯಲ್ಲಿ ತಲೆ ಎತ್ತುತ್ತಿರುವ ಸುನ್ನೀ ವಿಧ್ಯಾ ಕೇಂದ್ರಗಳಲ್ಲಿ ಅನಿವಾಸಿಗಳ ಕೊಡುಗೆಯನ್ನು ಅವರು ಶ್ಲಾಗಿಸಿದರು. ಪೆಬ್ರವರಿ 1,2,3,4 ತಾರೀಖುಗಳಲ್ಲಿ ನಡೆಯುವ 30 ನೇ ವಾರ್ಷಿಕೋತ್ಸವದ ಪ್ರಚಾರಾರ್ಥ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಅಲ್ ಮದೀನಾ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಅಲ್ ಮದೀನಾ ಮಂಜನಾಡಿ ಇದರ ಬುರೈದ ಘಟಕದ ಅಧ್ಯಕ್ಷರಾದ ಇಕ್ಬಾಲ್ ಯುನಿವರ್ಸಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಸಿ.ಎಫ್ ನೇತಾರ ಯಾಕೂಬ್ ಸಖಾಫಿ ಉದ್ಘಾಟಿಸಿದರು. ಅಲ್ ಮದೀನಾ ಮಂಜನಾಡಿ ಇದರ ಮದೀನತುಲ್ ಮುನವ್ವರ ಝೋನ್ ಅಧ್ಯಕ್ಷರಾದ ಮುಸ್ತಫಾ ಲತೀಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ದಾರುಲ್ ಹಿಕ್ಮ ಬೆಳ್ಳಾರೆ ಇದರ ಬುರೈದ ಘಟಕದ ಅಧ್ಯಕ್ಷ ಸಾಲಿ ಬೆಳ್ಳಾರೆ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಡಿಕೆಎಸ್ಸೀ ಇದರ ಬುರೈದ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಕಣ್ಣಂಗಾರ್, ದಾರುಲ್ ಇರ್ಷಾದ್ ಮಾಣಿ ಇದರ ಬುರೈದ ಘಟಕದ ಅಧ್ಯಕ್ಷ ಅಬ್ದು ಲ್ ರಝಾಕ್ ನೆಕ್ಕಿಲ್, ಸಅದಿಯಾ ಪೌಂಡೇಶನ್ ಬೆಂಗಳೂರು ಇದರ ಬುರೈದ ಘಟಕದ ಕಾರ್ಯದರ್ಶಿ ಬಶೀರ್ ಕನ್ಯಾನ ಸಹಿತ ವಿವಿಧ ಸಂಘ ಸಂಸ್ಥೆಗಳ ನೇತಾರರು ಭಾಗವಹಿಸಿದರು.
ಅಲ್ ಮದೀನಾ ಸಂಸ್ಥೆಯ ಆರ್ಗನೈಝರ್ ಹೈದರ್ ನಯಿಮೀ ಸ್ವಾಗತಿಸಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ