ಗಾಝಾ| ‘ನಾವೀಗ ಏಳನೇ ಸ್ವರ್ಗದಲ್ಲಿದ್ದೇವೆ. ಅಲ್ಲಿ ಹೊಸ ನಗರ ನಿರ್ಮಾಣವಾಗಲಿದೆ. ಅಲ್ಲಿ ಅಮರ ಪ್ರೇಮದ ಬಗ್ಗೆ ಹಾಡುವವರೆಲ್ಲ ಗಾಝಾದವರಾಗಿರುತ್ತಾರೆ’. ಗಾಝಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಕೊನೆಯುಸಿರೆಳೆಯುವ ಮುನ್ನ ಪ್ಯಾಲೆಸ್ತೀನ್ ಕವಿ ಹಿಬಾ ಕಮಾಲ್ ಅಬು ನಾದಾ ಬರೆದ ಸಾಲುಗಳಿವು. ಮರಣವನ್ನು ಎದುರು ನೋಡುತ್ತಾ ಹಿಬಾ ಬರೆದಿರುವ ಸಾಹಿತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಸ್ರೇಲಿ ದಾಳಿಯಿಂದ ಕೊಲ್ಲಲ್ಪಟ್ಟ, ಸೆರೆಹಿಡಿಯಲ್ಪಟ್ಟ ಮತ್ತು ಕಠಿಣ ಯಾತನೆ ಅನುಭವಿಸಿದ ತನ್ನ ಪ್ಯಾಲೆಸ್ತೀನ್ ಸಹೋದರ ಸಹೋದರಿಯರ ಮುಂದೆ ಹಿಬಾ ಹೀಗೆ ಬರೆದರು.
“ನಾವೀಗ ಏಳನೇ ಸ್ವರ್ಗದಲ್ಲಿದ್ದೇವೆ. ಅಲ್ಲಿ ಹೊಸ ನಗರ ನಿರ್ಮಾಣವಾಗಲಿದೆ. ರಕ್ತದಿಂದ ತೊಯ್ದ ಬಟ್ಟೆಯಲ್ಲಿ ಕಿರುಚುವ ರೋಗಿಗಳು ಮತ್ತು ವೈದ್ಯರಿಲ್ಲ. ಮಕ್ಕಳ ಮೇಲೆ ಕೋಪಗೊಳ್ಳುವ ಶಿಕ್ಷಕರಿಲ್ಲ, ದುಃಖಿಸುವ ಮತ್ತು ನೋಯುತ್ತಿರುವ ಕುಟುಂಬಗಳಿಲ್ಲ. ವರದಿಗಾರರು ಆ ಸ್ವರ್ಗಲೋಕವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದಾರೆ. ಅಮರ ಪ್ರೇಮದ ಬಗ್ಗೆ ಹಾಡುವವರೆಲ್ಲರೂ ಗಾಝಾದ ನಿವಾಸಿಗಳಾಗಿರುತ್ತಾರೆ. ಅವರು ಒಟ್ಟಾಗಿ ಸ್ವರ್ಗದಲ್ಲಿ ಹೊಸ ಗಾಝಾವನ್ನು, ದಿಗ್ಬಂಧನವಿಲ್ಲದ ಗಾಝಾವನ್ನು ನಿರ್ಮಿಸುತ್ತಾರೆ”
ಹಿಬಾ ಈಗ ಸ್ವರ್ಗದಲ್ಲಿರುವ ಗಾಝಾದಲ್ಲಿ ಅಮರ ಪ್ರೇಮದ ಬಗ್ಗೆ ಬರೆಯುತ್ತಿರಬಹುದು ಎಂದು ಹಲವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಗಾಝಾದ ಖಾನ್ ಯೂನಿಸ್ನಲ್ಲಿ ನಿನ್ನೆ ಇಸ್ರೇಲಿ ದಾಳಿಯಲ್ಲಿ 32 ವರ್ಷದ ಹಿಬಾ ಕೊಲ್ಲಲ್ಪಟ್ಟರು. ‘ಮರಣ ಹೊಂದಿದವರಿಗಲ್ಲ ಆಕ್ಸಿಜನ್’ ಕಾದಂಬರಿಗಾಗಿ ಹಿಬಾ ಶಾರ್ಜಾ ಪ್ರಶಸ್ತಿ ಪಡೆದಿದ್ದರು.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ