ಗಾಝಾ ಸಿಟಿ: ಗಾಝಾದಲ್ಲಿ ಇಸ್ರೇಲ್ನ ಮಾನವ ಹಕ್ಕುಗಳ ಉಲ್ಲಂಘನೆ ಮುಂದುವರಿದಿದೆ. ಅಲ್ ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ಇಸ್ರೇಲಿ ನಡೆಸಿದ ಬಾಂಬ್ ದಾಳಿಯಲ್ಲಿ 500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿಶ್ವಸಂಸ್ಥೆಯ ನಿರಾಶ್ರಿತರ ಶಿಬಿರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡನ್ ನಾಳೆ ಇಸ್ರೇಲ್ಗೆ ಆಗಮಿಸುತ್ತಿದ್ದಂತೆ ಹೊಸ ದಾಳಿ ನಡೆದಿದೆ.ಸೆಂಟ್ರಲ್ ಗಾಜಾದಲ್ಲಿರುವ ಅಲ್ ಅಹ್ಲಿ ಅರಬ್ ಆಸ್ಪತ್ರೆ ಕಾಪೌಂಡ್ ನಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಈ ವೇಳೆ ಕನಿಷ್ಠ 500 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ನೂರಾರು ಸಂತ್ರಸ್ತರು ಇನ್ನೂ ಅವಶೇಷಗಳ ಅಡಿಯಲ್ಲಿದ್ದಾರೆ. ಇದು “ಯುದ್ಧ ಅಪರಾಧ” ಎಂದು ಗಾಝಾ ಆರೋಪಿಸಿದೆ.
ಆಸ್ಪತ್ರೆ ಸುರಕ್ಷಿತ ತಾಣವಾಗಿದೆ ಎಂದು ಭಾವಿಸಿ ಸಾವಿರಾರು ಮಂದಿ ಮನೆ ತೊರೆದು ಅಲ್ಲಿ ಆಶ್ರಯ ಪಡೆದಿದ್ದಾರೆ. ಇದು ಮರಣ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು. ಆಸ್ಪತ್ರೆಯಲ್ಲಿ ಕನಿಷ್ಠ 4,000 ನಿರಾಶ್ರಿತರಿದ್ದಾರೆ ಎಂದು ದಾಳಿಯಿಂದ ಪಾರಾದ ವೈದ್ಯರು ಬಿಬಿಸಿಗೆ ತಿಳಿಸಿದ್ದಾರೆ. ಆಸ್ಪತ್ರೆ ಬಹುತೇಕ ಸಂಪೂರ್ಣ ಧ್ವಂಸಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದರು. ಘಟನೆಗೆ ಸಂಬಂಧಿಸಿದಂತೆ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.
ಇದುವರೆಗಿನ ಗಾಝಾದಲ್ಲಿ ಮೃತಪಟ್ಟವರ ಸಂಖ್ಯೆ 3000 ದಾಟಿದೆ. ಕಟ್ಟಡಗಳ ನಡುವೆ ಸಿಲುಕಿರುವ 1,200 ಜನರ ಪೈಕಿ 500 ಮಕ್ಕಳಿದ್ದಾರೆ. ಅವರನ್ನು ಹೊರತೆಗೆಯಬೇಕಾಗಿದೆ. ಗಾಝಾದ ಜನರು ಉಪಕರಣಗಳಿಲ್ಲದೆ ಅಸಹಾಯಕರಾಗಿದ್ದಾರೆ. ” ಅವಶೇಷಗಳಡಿಯಿಂದ ಅವರ ಕಿರುಚಾಟವನ್ನು ಕೇಳಬಹುದು, ಆದರೆ ನಮಗೆ ಏನೂ ಮಾಡಲು ಸಾಧ್ಯವಿಲ್ಲ” ಎಂದು ಗಾಜಾದಲ್ಲಿ ಡಾ. ಅಹ್ಮದ್ ಶಾಹೀನ್ ಹೇಳಿದರು, ಅವರು ತಮ್ಮ ಪ್ರೀತಿಪಾತ್ರರನ್ನು ಹೊರತೆಗೆಯಲು ಕೇವಲ ತಮ್ಮ ಕೈಗಳನ್ನು ಮಾತ್ರ ಹೊಂದಿದ್ದಾರೆ. ಗಾಯಾಳುಗಳಿಗೆ ನೀಡಲು ನೋವು ನಿವಾರಕಗಳಿಲ್ಲ, ಔಷಧಿಗಳಿಲ್ಲ, ಮಕ್ಕಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ತಮ್ಮ ಇಡೀ ದೇಹವನ್ನು ನೋಯಿಸುವಾಗ, ಆಘಾತಕ್ಕೊಳಗಾದಾಗ ಅಳುವುದನ್ನೇ ಮರೆತೀಬಿಟ್ಟಿದ್ದಾರೆ.
ಅಲ್ಲದೆ ಇಸ್ರೇಲ್ ವೈಮಾನಿಕ ದಾಳಿಗಳಿಂದಾಗಿ ಆಸ್ಪತ್ರೆಗಳು ಕುಸಿಯುವ ಹಂತದಲ್ಲಿದ್ದು, ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯಲ್ಲಿ 30,000 ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಈ ಕಟ್ಟಡ ಕೂಡ ವೈಮಾನಿಕ ದಾಳಿಗೆ ತುತ್ತಾಗುವ ಭೀತಿಯಲ್ಲಿದೆ.
ಅಂತರಾಷ್ಟ್ರೀಯ ಸಹಾಯ ಲಭಿಸದಿಧ್ದಲ್ಲಿ ಗಾಝಾಕೆ ಅತ್ಯಂತ ದೊಡ್ಡ ದುರಂತ ಎದುರಾಗಲಿದೆ. ಗಾಝಾದ ಆಸ್ಪತ್ರೆಗಳಲ್ಲಿ ಇಂಧನ ಖಾಲಿಯಾಗುತ್ತಿದೆ. ಆಸ್ಪತ್ರೆಗಳು ಮುಚ್ಚುವ ಹಂತದಲ್ಲಿವೆ. ಏತನ್ಮಧ್ಯೆ, ಯುಎನ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊಂದಿರುವ ಟ್ರಕ್ಗಳು ಈಜಿಪ್ಟ್ನ ರಫಾ ಗಡಿಯಲ್ಲಿ ಸಿಲುಕಿಕೊಂಡಿವೆ. ಇಸ್ರೇಲ್ ಒಪ್ಪದ ಕಾರಣ ಗಡಿ ದಾಟಲು ಸಾಧ್ಯವಿಲ್ಲ. ನಾಳೆ ಇಸ್ರೇಲ್ಗೆ ಆಗಮಿಸಲಿರುವ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಯಹೂದಿ ರಾಜ್ಯಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಲಿದ್ದಾರೆ.ಬಿಡೆನ್ ಅವರ ಭೇಟಿಯು ಗಾಝಾಕ್ಕೆ ಸಹಾಯವನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ ಎಂಬ ಇಸ್ರೇಲ್ ಭರವಸೆಯನ್ನು ಅನುಸರಿಸುತ್ತದೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ.
ಬಿಡೆನ್ ಅವರು ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್, ಜೋರ್ಡಾನ್ ರಾಜ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. 2,000 ಸೈನಿಕರನ್ನು ಸಿದ್ಧಗೊಳಿಸುವಂತೆ ಯುಎಸ್ ಕೇಳಿದೆ, ಆದರೆ ಅವರನ್ನು ನಿಯೋಜಿಸಲು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನಗಳಲ್ಲಿ ಇನ್ನೂ ಯಾವುದೇ ಪ್ರಗತಿಯಿಲ್ಲ. ಯುಎನ್ ಸೆಕ್ಯುರಿಟಿ ಕೌನ್ಸಿಲ್ ಪ್ಯಾಲೆಸ್ತೀನ್ ಕುರಿತ ರಷ್ಯಾದ ನಿರ್ಣಯವನ್ನು ತಿರಸ್ಕರಿಸಿದೆ ಯುಎಸ್, ಯುಕೆ ಮತ್ತು ಫ್ರಾನ್ಸ್ ಇದನ್ನು ವಿರೋಧಿಸಿದವು.
ಏತನ್ಮಧ್ಯೆ, ಲೆಬನಾನ್ ಗಡಿಯಲ್ಲಿ ಹಿಝ್ಬುಲ್ಲಾ-ಇಸ್ರೇಲಿ ಸಂಘರ್ಷವು ತಾರಕಕ್ಕೇರಿದೆ, ಇಸ್ರೇಲಿ ದಾಳಿಯಲ್ಲಿ ನಾಲ್ವರು ಹಿಝ್ಬುಲ್ಲಾ ಸದಸ್ಯರು ಮೃತಪಟ್ಟಿದ್ದಾರೆ. ಇನ್ನು ತಾಳ್ಮೆಯಿಂದ ಕಾಯಲು ಸಾಧ್ಯವಿಲ್ಲ ಎಂದು ಇರಾನ್ ಇಂದು ಪುನರುಚ್ಚರಿಸಿದೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ