janadhvani

Kannada Online News Paper

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: ಅರಬ್ ರಾಷ್ಟ್ರಗಳ ನಿಲುವೇನು?

ಇಸ್ರೇಲ್ ಪೊಲೀಸರ ಸಮ್ಮುಖದಲ್ಲಿ ಅಲ್-ಅಕ್ಸಾ ಮಸೀದಿಯಲ್ಲುಂಟಾದ ಸಂಘರ್ಷವು ಪರಿಸ್ಥಿತಿಯನ್ನು ಹದಗೆಡಿಸಿದೆ ಎಂದು ಕತಾರ್‌ ಹೇಳಿದೆ

ಇಸ್ರೇಲಿ-ಪ್ಯಾಲೆಸ್ತೀನ್ ಸಂಘರ್ಷ ಮತ್ತೆ ತೀವ್ರಗೊಂಡಿದೆ. ಹಮಾಸ್‌ನ ಹಠಾತ್ ದಾಳಿಯಿಂದ ಆಘಾತಕ್ಕೊಳಗಾದ ಇಸ್ರೇಲ್ ಗಾಜಾದಲ್ಲಿ ಪ್ರತೀಕಾರವನ್ನು ಪ್ರಾರಂಭಿಸಿದೆ. ಗಲ್ಫ್ ರಾಷ್ಟ್ರಗಳು ಸಂಘರ್ಷವನ್ನು ಕೊನೆಗೊಳಿಸುವಂತೆ ಕರೆ ನೀಡಿವೆ. ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಒಮಾನ್ ಘರ್ಷಣೆಯ ಬಗ್ಗೆ ದುಃಖ ವ್ಯಕ್ತಪಡಿಸಿವೆ.

ಈ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಪ್ರಯತ್ನಗಳು ವೇಗವನ್ನು ಪಡೆಯುತ್ತಿದ್ದಂತೆ ಅನಿರೀಕ್ಷಿತ ಸಂಘರ್ಷವು ಭುಗಿಲೆದ್ದಿದೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಸಂಘರ್ಷದಿಂದ ದೂರವಿರಲು ಎರಡೂ ಕಡೆಯವರನ್ನು ಸೌದಿ ಅರೇಬಿಯಾ ಕೇಳಿದೆ.

ಸಂಘರ್ಷದಿಂದ ಹಿಂದೆ ಸರಿಯುವುದು ಮತ್ತು ಶಾಂತಿಯನ್ನು ಮರುಸ್ಥಾಪಿಸುವಂತೆ ಯುಎಇ, ಕತಾರ್ ಮತ್ತು ಒಮಾನ್‌ನ ಕರೆ ನೀಡಿದೆ. ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಕರಾರುಗಳನ್ನು ಮತ್ತು ಪ್ಯಾಲೆಸ್ತೀನ್‌ನ ಹಕ್ಕುಗಳನ್ನು ರಕ್ಷಿಸಲು ಮಧ್ಯಪ್ರವೇಶಿಸುವಂತೆ ಕತಾರ್ ಅಂತರರಾಷ್ಟ್ರೀಯ ಸಮುದಾಯವನ್ನು ಕೇಳಿದೆ.

ಇಸ್ರೇಲ್ ಪೊಲೀಸರ ಸಮ್ಮುಖದಲ್ಲಿ ಅಲ್-ಅಕ್ಸಾ ಮಸೀದಿಯಲ್ಲುಂಟಾದ ಸಂಘರ್ಷವು ಪರಿಸ್ಥಿತಿಯನ್ನು ಹದಗೆಡಿಸಿದೆ ಎಂದು ಇಸ್ರೇಲ್ ವಿರುದ್ಧ ಟೀಕೆಗಳು ಕತಾರ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ಯಾಲೇಸ್ಟಿನಿಯನ್ ಹಕ್ಕುಗಳ ಸಂರಕ್ಷಣೆಗಾಗಿ ಜತೆಗೂಡಿ. ಅದೇ ಸಮಯದಲ್ಲಿ, ಪ್ರದೇಶದ ಹಿತಾಸಕ್ತಿಯನ್ನು ಮುಂದಿಟ್ಟು ಸಹಕಾರ ಸಾಧ್ಯವಿರುವ ಕ್ಷೇತ್ರಗಳಲ್ಲಿ ಇಸ್ರೇಲ್ನೊಂದಿಗೆ ಮುಂದುವರಿಯುವುದು. ಇದು ಇಸ್ರೇಲ್‌ನೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲದಿದ್ದರೂ ಸಹ
ಪ್ರಮುಖ ಅರಬ್ ದೇಶಗಳ ನಿಲುವಾಗಿದೆ.

ಫೆಲೆಸ್ತೀನ್ ಸಮಸ್ಯೆ ಬಗೆಹರಿದರೆ ಇಸ್ರೇಲ್ ಜತೆ ಮಾತುಕತೆ ನಡೆಸಬಹುದು ಎಂದು ಸೌದಿ ಅರೇಬಿಯಾ ಹೇಳಿತ್ತು. ಯುಎಇ ಇಸ್ರೇಲ್‌ನೊಂದಿಗೆ ವ್ಯಾಪಾರ ಸಂಬಂಧವನ್ನು ಸುಧಾರಿಸಿತ್ತು ಆದರೆ, ಅನಿರೀಕ್ಷಿತ ಸಂಘರ್ಷದಿಂದ ಪರಿಸ್ಥಿತಿ ಉಲ್ಬಣಗೊಂಡಿದೆ. ಜಿ20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮತ್ತು ರೈಲು-ಹಡಗು ಕಾರಿಡಾರ್‌ಗೆ ಒಪ್ಪಿಗೆ ನೀಡಲಾಗಿತ್ತು. ಏತನ್ಮಧ್ಯೆ, ಪ್ರದೇಶವು ಅಶಾಂತಿಯತ್ತ ತಿರುಗುತ್ತಿದೆ.

error: Content is protected !! Not allowed copy content from janadhvani.com