ಮಹಬುಲ: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಕುವೈಟ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ SSF ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ G-Meet ಕಾರ್ಯಕ್ರಮವು ಸೆ.2 ರಂದು ಮಹಬುಲ ಕಲಾ ಆಡಿಟೋರಿಯಂನಲ್ಲಿ ಬಹು ಹುಸೈನ್ ಮುಸ್ಲಿಯಾರ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು ಬಾದುಷಾ ಸಖಾಫಿ ಅವರು ದುಆ ನೆರವೇರಿಸಿ,ಜನಾಬ್ ಯಾಕೂಬ್ ಕಾರ್ಕಳ ಪ್ರ:ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿದರು. ಬಹು ಉಮರ್ ಝುಹ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘಟನ ವಿಭಾಗ ಅಧ್ಯಕ್ಷರು ಆಸಂಷಾ ಭಾಷಣ ಮಾಡಿ SSF ಬಗ್ಗೆ ವಿವರಿಸಿದರು,ಬಹು ಬಾದುಷ ಸಖಾಫಿ ಮಾತನಾಡಿ, SSF ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. SSF ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಇದರ ಪ್ರಚಾರಕ್ಕಾಗಿ ಆಗಮಿಸಿದ ರಿಸೀಪ್ಷನ್ ಕನ್ವಿನರ್ ಬಹು ಫಾರೂಕ್ ಅಮಾನಿ ಬೆಂಗಳೂರು ಮಾತನಾಡಿ, ಜೀವನ ಶೈಲಿ ಮತ್ತು SSF ಸಂಘಟನೆ ನಮ್ಮ ಜೀವನದ ಶಿಷ್ಟಚಾರವನ್ನು ಬದಲಾಯಿಸಿ ಮನುಷ್ಯನಿಗೆ ಉತ್ತಮ ಜೀವನ ನಡೆಸುವ ಅರಿವು ಮೂಡಿಸಲು ಉತ್ತಮ ಅವಕಾಶವಾಗಿದೆ ಎಂದರು.
SSF ಸಂಘಟನೆಯ ಸದಸ್ಯತ್ವ ಹೊಂದಿರುವ ಮಕ್ಕಳು, ಮದ್ಯಪಾನ, ಅಮಲು ಪದಾರ್ಥ ಬಗ್ಗೆ ಜಾಗೃತಿಗೊಂಡಿರುತ್ತಾರೆ. ಸ್ವಾತಂತ್ರ್ಯ ಭಾರತದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ವಿವರಿಸಿದ ಅವರು, ನಾವೆಲ್ಲರೂ ಬಾರತಿಯರು ಸೌಹಾರ್ದ, ಪ್ರೀತಿಯಿಂದ ಜೀವಿಸುವುದು ನಮ್ಮ ಹಕ್ಕಾಗಿದೆ ಎಂದು ವಿವರಿಸಿದರು.



KCF ಅಧ್ಯಕ್ಷರು ಬಹು ಜನಾಬ್ ಹುಸೈನ್ ಎರುಮಾಡ್ ಮಾತನಾಡಿ SSF ಹಾಗೂ KCF ಸದಸ್ಯರಿಗೆ ಇದು ಮಾದರಿ ಸಂಘಟನೆ ಎಂದು ಮನವರಿಕೆ ಮಾಡಿದರು.
ವೇದಿಕೆ ಯಲ್ಲಿ ಪ್ರಚಾರ ಮತ್ತು ಪ್ರಸಾರ ವಿಭಾಗದ ಅಧ್ಯಕ್ಷ ಸಾಹುಲ್ ಹಮೀದ್ ಸಅದಿ ಝುಹ್ರಿ ಜಹರ ಸೆಕ್ಟರ್ ಅಧ್ಯಕ್ಷ ಶಫೀಕ್ ಅಹ್ಸನಿ ಹಾಗೂ ಕೆಸಿಎಫ್ ಇಂಟರ್ನ್ಯಾಷನಲ್ ಕೌನ್ಸಿಲ್ (INC) ಸದಸ್ಯರು ಆದ ಝಕರಿಯಾ ಅನೇಕಲ್ ಉಪಸ್ಥಿತಿ ಇದ್ದು ಕೊನೆಯಲ್ಲಿ , ಬಹುಮಾನ್ಯ ಮಾಹಿನ್ ಸಖಾಫಿ ಉಸ್ತಾದರು ದುವಾ ಗೈದರು , ಧನ್ಯವಾದವನ್ನು ಆಡಳಿತ ವಿಭಾಗ ಅಧ್ಯಕ್ಷ ಅಬ್ಬಾಸ್ ಬಳಂಜ ನೆರವೇರಿಸಿದರು.
ವರದಿ :ಇಬ್ರಾಹಿಂ ವೇಣೂರು ಕುವೈಟ್
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)