ಮಾರ್ಚ್ 23 ರಂದು ಜಿದ್ದಾದಲ್ಲಿ ಮೃತಪಟ್ಟ ಝೈನಬ ಕಾಗಡಿಕಟ್ಟೆಯವರ ಅಂತ್ಯಕ್ರಿಯೆಯು ಮಾರ್ಚ್ 25 ರಂದು ಜಿದ್ದಾದ ಹಂದಾನಿಯ್ಯಾದಲ್ಲಿರುವ ಮಖ್ಬರ ಅಲ್ ಸ್ವಾಲಿಹಿಯ್ಯಾದಲ್ಲಿ ಕುಟುಂಬಸ್ತರು, ಸ್ನೇಹಿತರು, ಕೆಸಿಎಫ್ ನ ನೇತಾರರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಪವಿತ್ರ ಉಮ್ರಾ ಝಿಯಾರ ಮುಗಿಸಿ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 23 ಮೃತಪಟ್ಟಿದ್ದರು.
ಮರಣ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತರಾದ ಕೆಸಿಎಫ್ ಜಿದ್ದಾ ಝೋನ್ ಸಾಂತ್ವನ ಇಲಾಖೆಯ ನೇತಾರರು ಮೃತರ ಅಂತ್ಯ ಸಂಸ್ಕಾರಕ್ಕೆ ಬೇಕಾದ ದಾಖಲೆ ಪತ್ರಗಳು, ಭಾರತೀಯ ರಾಯಭಾರಿ ಕಚೇರಿಗೆ ಬೇಕಾದ ಕಡತಗಳು ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ತ್ವರಿತ ಗತಿಯಲ್ಲಿ ಸಿದ್ಧಪಡಿಸಿ ಮಯ್ಯತ್ ದಫನ ಕಾರ್ಯ ಶೀಘ್ರ ಗತಿಯಲ್ಲಿ ನಡೆಸಲು ಸಹಕರಿಸಿದರು.
ಮಯ್ಯತ್ ದಫನ ಕಾರ್ಯದಲ್ಲಿ ಕೆಸಿಎಫ್ ಬವಾದಿ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ನಾಫಿ ತಂಙಳ್, ಸುಲೈಮಾನ್ ಸಅದಿ, ಅಶ್ರಫ್ MSM, ಕುಟುಂಬಸ್ತರಾದ ಅನ್ಸಾರ್ ಸೋಮವಾರಪೇಟೆ ಹಾಗೂ ಕೊಡಗು ಸುನ್ನಿ ವೆಲ್ಫೇರ್ ನ ಕಾರ್ಯಕರ್ತರು ಸೇರಿದಂತೆ ಹಲವಾರು ಕೆಸಿಎಫ್ ಕಾರ್ಯಕರ್ತರು ಹಿತೈಷಿಗಳು ಭಾಗವಹಿಸಿದ್ದರು.