ಸೌದಿ ಅರೇಬಿಯಾ: ಹೀರಾ ಗುಹೆಯ ಸಂದರ್ಶನ ನಿಷೇಧ ನಂತರ ಇದೀಗ ತಾಯಿಫ್ನ ಕೆಲವು ಪ್ರದೇಶಗಳಲ್ಲಿನ ಸಂದರ್ಶನವನ್ನು ಹಜ್ ಉಮ್ರಾ ಯಾತ್ರಾರ್ಥಿಗಳಿಗೆ ನಿಷೇಧಿಸಲಾಗಿದೆ. ತಾಯಿಫ್ನ ಹತ್ತಿರದ ಹಲೀಮತು ಸಅದಿಯ್ಯ ಪ್ರದೇಶ ಮತ್ತು ಇತರ ಕೆಲವು ಮಸೀದಿಗಳನ್ನು ಭೇಟಿ ಮಾಡುವುದನ್ನು ಹಜ್ ಉಮ್ರಾ ಯಾತ್ರಾರ್ಥಿಗಳಿಗೆ ನಿಯಂತ್ರಣ ಏರ್ಪಡಿಸಲಾಗಿದೆ.
ಯಾತ್ರೆಯ ಭಾಗವಾಗಿ ಈ ಸ್ಥಳಗಳನ್ನು ಭೇಟಿ ಮಾಡಬಾರದು ಎಂದು ಸಚಿವಾಲಯವು ಕೇಳಿಕೊಂಡಿದೆ ಮತ್ತು ಹಜ್ ಪ್ಯಾಕೇಜ್ ಗಳಲ್ಲಿ ಈ ಸ್ಥಳಗಳನ್ನು ಅಳವಡಿಸಬಾರದು ಎಂದು ಸಚಿವಾಲಯ ನಿರ್ದೇಶಿಸಿದೆ.ಹಜ್ ಮತ್ತು ಸೇವಾ ಸಂಸ್ಥೆಗಳು ಉಲ್ಲಂಘನೆ ಮಾಡಿದಲ್ಲಿ ಅದರ ಪರವಾನಗಿಯನ್ನು ರದ್ದುಗೊಳಿಸಲು ಸಚಿವಾಲಯ ಆದೇಶ ನೀಡಿದೆ.
ಐತಿಹಾಸಿಕ ಹಿನ್ನೆಲೆಯನ್ನು ದೃಢೀಕರಿಸಲಾಗದ ಕಾರಣ ಈ ನಿಯಂತ್ರಣ ಎನ್ನಲಾಗಿದೆ.ಸಚಿವಾಲಯದ ಉಪ ನಿರ್ದೇಶಕರಾದ ಅಬ್ದುಲ್ ಅಝೀಝ್ ಬಿನ್ ಅಸ್ಸಾದ್ ದಮನ್ಹುರಿ, ಈ ಸ್ಥಳಗಳಿಗೆ ಪ್ರವಾದಿ ಇತಿಹಾಸದೊಂದಿಗೆ ಯಾವುದೇ ಸಂಬಂಧ ಇರುವುದಾಗಿ ದೃಢೀಕರಿಸಲಾಗಿಲ್ಲ ಎಂದು ಹೇಳಿದ್ದಾರೆ.
ಪ್ರವಾದಿ(ಸ.ಅ)ಯವರಿಗೆ ಎದೆಹಾಲು ಉಣಿಸಿ, ಬೆಳೆಸಿದ ಹಲೀಮಾ ಬೀವಿ ಅವರ ಮನೆಯಾಗಿ ಗಣಿಸಿ ಹಲೀಮತು ಸಅದಿಯಾಗೆ ಯಾತ್ರಿಗಳು ಬರುತ್ತದ್ದಾರೆ ಆದರೆ, ಇದಕ್ಕೆ ಐತಿಹಾಸಿಕ ಆಧಾರವಿಲ್ಲ ಎಂದು ಸಚಿವಾಲಯ ಹೇಳಿಕೊಂಡಿದೆ.
ಪ್ರವಾಸೋದ್ಯಮಕ್ಕೆ ಸಚಿವಾಲಯ ಅನುಮತಿಸದ ಪ್ರವಾಸಿ ಸ್ಥಳಗಳು ಮತ್ತು ನಿರ್ಮಾಣ ಹಂತದ ಸ್ಥಳಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ.
ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದ್ದ ಜಬಲನ್ನೂರ್ ಬೆಟ್ಟಕ್ಕೆ ಭೇಟಿ ನೀಡುವುದಕ್ಕೂ ಇತ್ತೀಚೆಗೆ ಸಚಿವಾಲಯವು ನಿರ್ಬಂಧ ಹೇರಿತ್ತು.ಭದ್ರತಾ ಕಾಳಜಿ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ಈ ನಿರ್ಬಂಧವನ್ನು ಹೇರಲಾಗಿದೆ ಎಂದು ಸಚಿವಾಲಯ ತಿಳಿಸಿತ್ತು.















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ