ಪ್ರಖ್ಯಾತ ಬರಹಗಾರ ಮಾರ್ಟಿನ್ ಲಿಂಗ್ಸ್ ಬರೆದ ಮುಹಮ್ಮದ್ ಎಂಬ ಪುಸ್ತಕದ, ಸ್ವಾಲಿಹ್ ತೋಡಾರ್ ರವರ ಕನ್ನಡದ ಅನುವಾದದ ಪ್ರತಿಯನ್ನು ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿಯ ಮಾಸಿಕ ಸ್ವಲಾತ್ ಕಾರ್ಯಕ್ರಮದಲ್ಲಿ, ಬಹುಮಾನ್ಯರಾದ ಸಯ್ಯದ್ ಅರ್ಷದ್ ಅಲಿ ತಂಙಳ್ ಈಶ್ವರಮಂಗಳ ರವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕೆ.ಸಿ.ಎಫ್. ಅಂತಾರಾಷ್ಟ್ರೀಯ ಸಮಿತಿ ನಾಯಕರುಗಳಾದ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ, ಯೂಸುಫ್ ಸಖಾಫಿ ಅಯ್ಯಂಗೇರಿ, ಕಬೀರ್ ದೇರಳಕಟ್ಟೆ, ಖತ್ತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹನೀಫ್ ಪಾತೂರು, ಕೋಶಾಧಿಕಾರಿ ಮುನೀರ್ ಮಾಗುಂಡಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ, ಮೊದಲಾದವರು ಉಪಸ್ಥಿತರಿದ್ದರು.ಪುಸ್ತಕದ ಕುರಿತು ಪಬ್ಲಿಕೇಶನ್ ವಿಂಗ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಹಂಡುಗೂಳಿ ರವರು ನೆರೆದಿದ್ದ ಸಭಿಕರಿಗೆ ವಿವರಣೆ ನೀಡಿದರು.