janadhvani

Kannada Online News Paper

ಸಿ.ಟಿ.ರವಿ ಮುಸ್ಲಿಮ್ ಯುನಿವರ್ಸಿಟಿಯ ಪ್ರಾಂಶುಪಾಲ ಹುದ್ದೆಗೆ ಅರ್ಜಿ ಸಲ್ಲಿಸಲಿ- ಕೆ.ಅಶ್ರಫ್

ಮತೀಯ ಉದ್ವಿಗ್ನತೆ ಸೃಷ್ಟಿಸುವ ರೀತಿಯಲ್ಲಿ ಧಾರ್ಮಿಕ ಗ್ರಂಥ ಖುರ್‌ಆನ್ ಸೂಕ್ತ ಗಳನ್ನು ಅಪಾರ್ಥವಾಗಿ ಸಂಭೋಧಿಸಿದ ಸಿ.ಟಿ.ರವಿ

ಮಂಗಳೂರು: ಇತ್ತೀಚೆಗೆ ಬಿಜೆಪಿ ಶಾಸಕ ಸಿ. ಟಿ.ರವಿಯವರು ಪತ್ರಿಕಾ ಹೇಳಿಕೆ ನೀಡಿ ಮತೀಯ ಉದ್ವಿಗ್ನತೆ ಸೃಷ್ಟಿಸುವ ರೀತಿಯಲ್ಲಿ ಧಾರ್ಮಿಕ ಗ್ರಂಥ ಕುರಾನ್ ಸೂಕ್ತ ಗಳನ್ನು ಅಪಾರ್ಥವಾಗಿ ಸಂಭೋಧಿಸಿರುತ್ತಾರೆ.

ಪವಿತ್ರ ಕುರಾನ್ ಸಂಬೋಧನೆ ಮತ್ತು ಅರ್ಥೈಸುವಿಕೆ ಸಿ.ಟಿ.ರವಿ ಇಚ್ಚಿದಷ್ಟು ಸುಲಭವಲ್ಲ. ಕುರಾನ್ ನ ಬಗ್ಗೆ ಪೂರ್ವ ಗೃಹ ಪೀಡಿತ ವಾಗಿ ಪ್ರಸ್ತಾಪಿಸಿದರೆ,ಸಿ.ಟಿ.ರವಿ ಯಂತಹ ವಿದ್ವೇಶಿಗಳಿಗೆ ಬೇರೇನು ಕಾಣಿಸಲು ಸಾದ್ಯ ?.

ಕೇಶವ ಕೃಪಾ ಪ್ರೇರಿತ ಚೀಟಿಗಳನ್ನು ಮಾಧ್ಯಮದ ಮುಂದೆ ಪಠಿಸಿ ಧರ್ಮ ಬೋಧನೆ ಮಾಡುವ ಬದಲು ಸಿ.ಟಿ.ರವಿ ಯಾವುದಾದರೂ ಮುಸ್ಲಿಮ್ ವಿಶ್ವ ವಿದ್ಯಾಲಯದ ಪ್ರಾಂಶುಪಾಲ ಆಗಿ ಕಾರ್ಯ ನಿರ್ವಹಿಸಲಿ.

ಕೆ.ಅಶ್ರಫ್
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com