ಕುವೈಟ್ ಸಿಟಿ: ವಿದೇಶಿಗಳು ಕಳುಹಿಸುವ ಹಣಕ್ಕೆ ತೆರಿಗೆಯನ್ನು ವಿಧಿಸುವ ನಿರ್ದೇಶನ ವನ್ನು ಕುವೈಟ್ ಸರ್ಕಾರವು ನಿರಾಕರಿಸುವ ಸಾಧ್ಯತೆ ಇದೆ. ಈ ಕಾನೂನಿನ ಅನುಷ್ಠಾನವು ಅಸಂವಿಧಾನಿಕವಾಗಿದೆ ಎಂದು ಶಾಸನ ಮಂಡಳಿಯ ವಾದವಾಗಿದೆ. ಆದರೆ ಕರಡು ಬಿಲ್ಗೆ ಅನುಮತಿ ನೀಡಿದ್ದ ಹಣಕಾಸು ಸಮಿತಿಯು ಸಂವಿಧಾನಿಕವಾಗಿ ಯಾವುದೇ ಅಡಚಣೆಯಿಲ್ಲ ಎಂಬ ತನ್ನ ನಿಲುವಿಗೆ ಬದ್ದವಾಗಿ ನಿಂತಿದೆ.
ಹೊಸ ಶಾಸನವು ಖೋಟಾನೋಟು ಬದಲಾಯಿಸಲು ಮತ್ತು ಭಯೋತ್ಪಾದಕರಿಗೆ ಹಣಕಾಸನ್ನು ತಲುಪಿಸುವುದು ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯುಕ್ತ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ನ್ಯಾಯಾಂಗ ಸದಸ್ಯರು ಹೇಳಿದ್ದಾರೆ.
ಜನರನ್ನು ಇಬ್ಬಗೆಗೊಳಿಸುವ ಅಂತಹ ಕಾನೂನುಗಳನ್ನು ಜಾರಿಗೆ ತಂದರೆ ಅದು ಸಂವಿಧಾನಕ್ಕೆ ವಿರೋಧವಾಗಿದೆ ಎಂದು ಕಾನೂನು ವಿಚಾರಗಳ ಸಮಿತಿಯ ಅಧ್ಯಕ್ಷ ಹುಮೈದಿ ಅಲ್-ಸುಬಾಹಿ ಹೇಳಿದರು. ಇದರ ಕುರಿತು ಯಾವುದೇ ಸ್ಪಷ್ಟ ಗ್ರಹಿಕೆ ಇಲ್ಲ. ಈ ಕಾನೂನು ಜಾರಿಗೆ ಬರುವ ಮೊದಲು ವಿವರವಾದ ಅಧ್ಯಯನವನ್ನು ನಡೆಸಬೇಕು. ಈ ವಿಷಯದಲ್ಲಿ ಸರ್ಕಾರ ತನ್ನದೇ ಆದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ ಎಂದು ಅಲ್-ಹುಮೈದಿ ಹೇಳಿದರು. ಸಂಸತ್ತಿನ ಎರಡು ಪ್ರದಾನ ಸಮಿತಿಗಳು ಎರಡು ವಾದಗಳನ್ನು ಮಂಡಿಸಿರುವ ಕಾರಣ ಸರ್ಕಾರವು ನಿರ್ಣಯವನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಣ ವ್ಯವಹಾರಿಕ ಸಂಸ್ಥೆಗಳು ಮತ್ತು ಮನಿ ಎಕ್ಸ್ಚೇಂಜ್ ಯೂನಿಯನ್ಗಳು ದೇಶದ ಹೊಸ ಶಾಸನವನ್ನು ವಿರೋಧಿಸಿವೆ.ಹಣವನ್ನು ಕಳುಹಿಸಲು ತಪ್ಪು ಮಾರ್ಗಗಳನ್ನು ಹುಡುಕುವಲ್ಲಿ ವಿದೇಶಿಗಳಿಗೆ ಪ್ರೇರಣೆಯಾಗಲಿದೆ ಎಂಬುದು ಅವರ ವಾದವಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು