ದುಬೈ, ನ. 14: ಇರಾನ್ ದೇಶದ ದಕ್ಷಿಣ ಭಾಗದಲ್ಲಿ ಭಾನುವಾರ ಸಂಜೆ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇರಾನ್ನ ಹಾರ್ಮೊಜಗನ್ ಪ್ರಾಂತ್ಯದ ಬಂದರ್ ಅಬ್ಬಾಸ್ ನಗರದಿಂದ 47 ಕಿಮೀ ದೂರದಲ್ಲಿ ಹಾಗೂ 10 ಕಿಮೀ ಆಳದಲ್ಲಿ ಈ ಭೂಕಂಪವಾಗಿದೆ.
ಮೊದಲಿಗೆ 6.1 ತೀವ್ರತೆ ಎಂದು ದಾಖಲಾಗಿತ್ತು. ಬಳಿಕ 6.5 ತೀವ್ರತೆಯ ಭೂಕಂಪ ಎಂಬ ವರದಿಗಳು ಬಂದಿವೆ. ಇಷ್ಟು ತೀವ್ರತೆಯ ಭೂಕಂಪವನ್ನು ಪ್ರಬಲ ಭೂಕಂಪ ಎಂದೇ ಪರಿಗಣಿಸಲಾಗುತ್ತದೆ.
ಇರಾನ್ನಲ್ಲಿ ಭೂಕಂಪ ಸಂಭವಿಸಿದರೂ ಸುತ್ತಲಿನ ಅರಬ್ ದೇಶಗಳಲ್ಲಿ ಭೂಮಿ ನಡುಗಿದೆ. ದುಬೈನ ವಿವಿಧ ಪ್ರದೇಶಗಳಾದ ಜುಮೇರಾ ಲೇಕ್ ಟವರ್ಸ್, ನಹದಾ, ದೇರಾ,ಅಲ್ ಬರ್ಶಾ, ದುಬೈ ಇನ್ವೆಸ್ಟ್ಮೆಂಟ್ ಪಾರ್ಕ್, ಡಿಸ್ಕವರಿ ಗಾರ್ಡನ್ಸ್ ಮೊದಲಾದೆಡೆ ಕೆಲ ನಿಮಿಷಗಳವರೆಗೆ ಭೂಮಿ ಕಂಪಸಿದ ಅನುಭವ ಆಯಿತು ಎಂದು ದುಬೈನ ನಿವಾಸಿಗಳು ತಿಳಿಸಿದ್ದಾರೆ.
ಯುಎಇಯ ಇತರ ಪ್ರಾಂತ್ಯಗಳಾದ ಶಾರ್ಜಾ, ಅಬುಧಾಬಿಯಲ್ಲೂ ಭೂಮಿ ಕಂಪಿಸಿರುವುದು ತಿಳಿದುಬಂದಿದೆ.
ಭೂಕಂಪವಾದರೂ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ನಿಗದಿಯಂತೆ ನಡೆದಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಯಾವ ಸ್ಪಷ್ಟನೆಯ ಹೇಳಿಕೆಯೂ ಬರಲಿಲ್ಲ.
ಇರಾನ್ನಲ್ಲಿ ಸಂಭವಿಸಿದ ಈ ಭೂಕಂಪದಿಂದ ಪರಿಣಾಮ ಉಂಟಾಗಿರುವುದು ಯುಎಇಯಲ್ಲಿ ಅಷ್ಟೇ ಅಲ್ಲ ಪಾಕಿಸ್ತಾನ್ ದೇಶದವರೆಗೂ ಭೂಮಿಯಲ್ಲಿ ಕಂಪನದ ಅನುಭವಗಳು ಆಗಿರುವುದು ವರದಿಯಾಗಿದೆ. ಬಹ್ರೇನ್, ಸೌದಿ ಅರೇಬಿಯಾ, ಒಮಾನ್, ಕತಾರ್, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದಲ್ಲಿ ಕಂಪನಗಳಾಗಿವೆ.
ಇರಾನ್ನ ಬಂದರ್ ಅಬ್ಬಾಸ್ ನಗರದಲ್ಲಿ ಭೂಕಂಪದ ಕಾರಣದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆಂದು ಇರಾನ್ನ ಸ್ಥಳೀಯ ಟಿವಿಗಳ ವರದಿಗಳು ಹೇಳುತ್ತಿವೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ