janadhvani

Kannada Online News Paper

ನಿರ್ಬಂಧ ತೆರವು- ಸೆ.1 ರಿಂದ ಭಾರತೀಯರಿಗೆ ಪ್ರವೇಶಾನುಮತಿ

ಮಸ್ಕತ್ :ಒಮಾನ್ ಭಾರತೀಯರ ಮೇಲಿನ ಪ್ರವೇಶ ನಿಷೇಧವನ್ನು ತೆಗೆದುಹಾಕಿದೆ. ಲಸಿಕೆಯ ಎರಡು ಡೋಸ್ ತೆಗೆದುಕೊಂಡವರು ಸೆಪ್ಟೆಂಬರ್ 1ರಿಂದ ದೇಶಕ್ಕೆ ಮರಳಬಹುದು.

ಎರಡನೇ ಡೋಸ್ ಪಡೆದು ಕನಿಷ್ಠ 14 ದಿನಗಳು ಕಳೆದವರಿಗೆ ಮಾತ್ರ ಪ್ರವೇಶ ಸಾಧ್ಯ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಘೋಷಿಸಿದೆ.

ಭಾರತ ಸೇರಿದಂತೆ 18 ದೇಶಗಳ ಪ್ರಯಾಣಿಕರ ನಿಷೇಧವನ್ನು ತೆಗೆದುಹಾಕಲಾಗಿದೆ. ಒಮಾನ್ ಅನುಮೋದಿಸಿದ ಲಸಿಕೆಗಳನ್ನು ಪಡೆದವರಿಗೆ ಮಾತ್ರ ಮರಳಲು ಅವಕಾಶ. ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ, ಫೈಜರ್, ಸ್ಪುಟ್ನಿಕ್ ಮತ್ತು ಸಿನೋವಾಕ್ ಲಸಿಕೆಗಳನ್ನು ಒಮಾನ್‌ನಲ್ಲಿ ಅನುಮೋದಿಸಲಾಗಿದೆ.

ರಸ್ತೆ , ಸಮುದ್ರ ಮತ್ತು ವಾಯು ಮಾರ್ಗಗಳ ಮೂಲಕ ಒಮಾನ್‌ಗೆ ತೆರಳುವ ಎಲ್ಲಾ ಪ್ರಯಾಣಿಕರಿಗೆ ಇದು ಅನ್ವಯ.ಕಳೆದ ನಾಲ್ಕು ತಿಂಗಳಿನಿಂದ ಒಮಾನ್‌ಗೆ ಪ್ರಯಾಣ ನಿಷೇಧ ಜಾರಿಯಲ್ಲಿದೆ. ಇದರನ್ವಯ, ಸಾವಿರಾರು ವಲಸಿಗರು ಭಾರತದಲ್ಲಿ ಉಳಿಯುವಂತಾಗಿದೆ. ಒಮಾನಿನ ಹೊಸ ನಿರ್ಧಾರವು ಸಮಾಧಾನಕರವಾಗಿದೆ.ಇಂದು ಸಂಜೆ ವಿವಿಧ ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕ್ಕಿಂಗ್ ಆರಂಭಿಸುವ ಸಾಧ್ಯತೆಯಿದೆ.

error: Content is protected !! Not allowed copy content from janadhvani.com