ಮಕ್ಕತುಲ್ ಮುಕರ್ರಮಃ: ಪವಿತ್ರ ರಂಜಾನ್ ತಿಂಗಳ ಕೊನೆಯ ಹತ್ತು ದಿನಗಳು ಪ್ರವೇಶಿಸುತ್ತಿದ್ದಂತೆ ಮಕ್ಕಾ ಮತ್ತು ಮದೀನಾದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಹರಮ್ ಮಸೀದಿಯಲ್ಲಿ ಕಿಯಾಮುಲ್ಲೈಲ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಬುಕಿಂಗ್ ಪ್ರಾರಂಭವಾಗಿದೆ. ಕೊನೆಯ ಹತ್ತರಲ್ಲಿ ಹೆಚ್ಚು ವಿಶ್ವಾಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಎರಡು ಹರಂಗಳ ಕಾರ್ಯಾಲಯ ತಿಳಿಸಿದೆ.
ರಂಜಾನ್ನ ಕೊನೆಯ ಹತ್ತು ದಿನಗಳು ನರಕ ಮೋಚನೆ ಮತ್ತು ಸ್ವರ್ಗದ ಪ್ರವೇಶಕ್ಕಾಗಿ ಸೃಷ್ಟಿ ಕರ್ತನಾದ ಅಲ್ಲಾಹನಲ್ಲಿ ಅತೀವ ಭಕ್ತಿಯಿಂದ ಪ್ರಾರ್ಥಿಸುವ ಹಗಲು ರಾತ್ರಿಗಳಾಗಿವೆ.
ಖುರ್ಆನ್ ನಲ್ಲಿ ಅವತರಣಗೊಂಡ, ಸಾವಿರ ತಿಂಗಳುಗಳಿಗಿಂತಲೂ ಹೆಚ್ಚು ಪವಿತ್ರವಾಗಿರುವ ಲಯ್ಲತುಲ್-ಖದ್ರ್ನಿಂದ ಆಶೀರ್ವದಿಸಲ್ಪಟ್ಟ ರಾತ್ರಿಯೊಂದಿಗೆ, ಈ ಹತ್ತು ದಿನಗಳಲ್ಲಿ ಪ್ರಾರ್ಥನೆಗಾಗಿ ಹರಂಗೆ ಆಗಮಿಸುವ ಜನರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಲಿದೆ.
ಕೋವಿಡ್ ನಿರ್ಬಂಧದ ಭಾಗವಾಗಿ, ಕಳೆದ ವರ್ಷ ರಂಜಾನ್ ಸಮಯದಲ್ಲಿ ಸಾರ್ವಜನಿಕರಿಗೆ ಹರಂ ಪ್ರವೇಶಿಸಲು ಅವಕಾಶವಿರಲಿಲ್ಲ. ಈ ರಂಜಾನ್ ಸಮಯದಲ್ಲಿ, ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಿ ಗರಿಷ್ಠ ಸಂಖ್ಯೆಯ ವಿಶ್ವಾಸಿಗಳಿಗೆ ಪ್ರವೇಶಾನುಮತಿ ನೀಡಲಾಗಿದೆ. ಹರಮ್ನಲ್ಲಿ ಕಿಯಾಮುಲ್ಲೈಲ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಪರವಾನಗಿಗಳನ್ನು ನೀಡಲು ಆರಂಭಿಸಲಾಗಿದೆ.
ಹರಂಗೆ ಬರುವವರಿಗೆ ಸೇವೆ ಸಲ್ಲಿಸಲು 400 ಕ್ಕೂ ಹೆಚ್ಚು ಸ್ವಯಂಸೇವಕರು ಕೈ ಜೋಡಿಸಲಿದ್ದಾರೆ. ದಟ್ಟಣೆ ನಿಯಂತ್ರಣದ ಭಾಗವಾಗಿ, ಉಮ್ರಾ ಅಥವಾ ಪ್ರಾರ್ಥನೆಗೆ ಅನುಮತಿ ಪಡೆದವರ ವಾಹನಗಳನ್ನು ಮಾತ್ರ ಹರಮ್ ವಲಯಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಮಕ್ಕಾದಲ್ಲಿ ವಿವಿಧ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರ ಸೀಮಿತ ಸಮಯದವರೆಗೆ ವಾಹನ ನಿಲುಗಡೆ ಮಾಡಲು ಅವಕಾಶವಿರುತ್ತದೆ. ಮಕ್ಕಳಿಗೆ ಹರಮ್ ಪ್ರವೇಶಿಸಲು ಅವಕಾಶವಿಲ್ಲ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ