ಮಂಗಳೂರು: ವಿಶ್ವ ಅಂಗೀಕೃತ ದೇವ ಅವತೀರ್ಣ ದಿವ್ಯ ಗ್ರಂಥ ಕುರ್ ಆನ್ ನ ಸೂಕ್ತ ಗಳ ಮೌಲ್ಯಗಳನ್ನು ಪ್ರಶ್ನಿಸಿ ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ವಸೀಮ್ ರಿಝ್ವಿ ಯವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ದಾವೆ ಸಲ್ಲಿಸಿ ಖುರ್ಆನ್ ನ 26 ಸೂಕ್ತಗಳು ಭಯೋತ್ಪಾದನೆಗಳನ್ನು ಪ್ರೋತ್ಸಾಹಿಸುತ್ತದೆ ಎಂಬುದಾಗಿ ಹೇಳಿ ಸೂಕ್ತಗಳನ್ನು ರದ್ದು ಪಡಿಸಬೇಕು ಎಂದು ವ್ಯಾಜ್ಯ ಸ್ಥಾಪಿಸಿರುವುದು ಖಂಡನೀಯ.
ದಿವ್ಯ ಖುರಾನ್ ದೇವಗ್ರಂಥ ವಾಗಿದೆ. ಈ ಜಗತ್ತು ಅಂತ್ಯದವರೆಗೆ ಅಸ್ತಿತ್ವದಲ್ಲಿರಬೇಕಾದ ಒಂದು ಮಹಾ ಮಾರ್ಗದರ್ಶಕವಾಗಿದೆ ಖುರ್ ಆನ್. ಖುರ್ ಆನ್ ತನ್ನ ಸ್ವರಕ್ಷಣೆ ಹೊಂದಲು ಅರ್ಹವಿರುವ ದೇವ ಗ್ರಂಥವಾಗಿದೆ. ಯಾವುದೇ ಮಾನವ ನಿರ್ಮಿತ ವ್ಯವಸ್ಥೆಯಿಂದ ಖುರ್ ಆನ್ ಅನ್ನು ವ್ಯತ್ಯಯ ಗೊಳಿಸಬಹುದು ಎಂದು ನಂಬಿದವರು ಜೀವಿಸಿದ್ದರೆ ಅದು ಅವರ ಮೂರ್ಖತನದ ಬಿಂಬನೆಯಾಗಿದೆ.
ವಿಶ್ವದ ಸರ್ವ ಸ್ಥಳಗಳಲ್ಲಿ ಖುರ್ ಆನ್ ವಿವಾದಾತೀತ ವಾಗಿ ಆಲಿಕೆ ಗೊಳ್ಳುತ್ತಿದೆ. ವಸೀಮ್ ರಿಝ್ವಿ ಯವರು ನ್ಯಾಯಾಲಯಕ್ಕೆ ಮಾಡಿರುವ ಅಪೇಕ್ಷೆ ಧರ್ಮನಿಂದನೆ ಮತ್ತು ಧರ್ಮಕ್ಕೆ ಎಸಗಿರುವ ಅವಹೇಳನವಾಗಿದೆ.
ಈ ಬಗ್ಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ವಸೀಮ್ ರಿಝ್ವಿ ಯ ನಡೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತ ಪಡಿಸುತ್ತದೆ. ರಿಝ್ವಿ ಗೆ ಧರ್ಮ ಗ್ರಂಥದ ಬಗ್ಗೆಗಿನ ಜ್ಞಾನದ ಕೊರತೆಯಿದೆ. ರಿಝ್ವಿ ಯು ತನ್ನನ್ನು ಸ್ವಯಂ ಬಹಿಷ್ಕಾರ ಕ್ಕೊಳ ಪಡಿಸಿದ್ದಾರೆ. ದಿವ್ಯ ಗ್ರಂಥ ಕುರ್ ಆನ್ ಸ್ವಯಂ ನ್ಯಾಯ ಭೋದನೆ ಯಾಗಿ ದೆ. ಜಗತ್ತಿನ ಯಾವುದೇ ನ್ಯಾಯಾಲಯವು ದೇವ ಗ್ರಂಥದ ಮೌಲ್ಯಗಳನ್ನು ಗೌರವಿಸುವ ಚರಿತ್ರೆ ಯೆ ಇತಿಹಾಸದಲ್ಲಿ ನಡೆದು ಹೋಗಿದೆ. ಆದುದರಿಂದ ರಿಝ್ವಿ ಗೆ ಸೂಕ್ತ ಶಿಕ್ಷೆ ಆಗಲಿ.
ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ