ಮಂಗಳೂರು: ವಿಶ್ವ ಅಂಗೀಕೃತ ದೇವ ಅವತೀರ್ಣ ದಿವ್ಯ ಗ್ರಂಥ ಕುರ್ ಆನ್ ನ ಸೂಕ್ತ ಗಳ ಮೌಲ್ಯಗಳನ್ನು ಪ್ರಶ್ನಿಸಿ ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ವಸೀಮ್ ರಿಝ್ವಿ ಯವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ದಾವೆ ಸಲ್ಲಿಸಿ ಖುರ್ಆನ್ ನ 26 ಸೂಕ್ತಗಳು ಭಯೋತ್ಪಾದನೆಗಳನ್ನು ಪ್ರೋತ್ಸಾಹಿಸುತ್ತದೆ ಎಂಬುದಾಗಿ ಹೇಳಿ ಸೂಕ್ತಗಳನ್ನು ರದ್ದು ಪಡಿಸಬೇಕು ಎಂದು ವ್ಯಾಜ್ಯ ಸ್ಥಾಪಿಸಿರುವುದು ಖಂಡನೀಯ.
ದಿವ್ಯ ಖುರಾನ್ ದೇವಗ್ರಂಥ ವಾಗಿದೆ. ಈ ಜಗತ್ತು ಅಂತ್ಯದವರೆಗೆ ಅಸ್ತಿತ್ವದಲ್ಲಿರಬೇಕಾದ ಒಂದು ಮಹಾ ಮಾರ್ಗದರ್ಶಕವಾಗಿದೆ ಖುರ್ ಆನ್. ಖುರ್ ಆನ್ ತನ್ನ ಸ್ವರಕ್ಷಣೆ ಹೊಂದಲು ಅರ್ಹವಿರುವ ದೇವ ಗ್ರಂಥವಾಗಿದೆ. ಯಾವುದೇ ಮಾನವ ನಿರ್ಮಿತ ವ್ಯವಸ್ಥೆಯಿಂದ ಖುರ್ ಆನ್ ಅನ್ನು ವ್ಯತ್ಯಯ ಗೊಳಿಸಬಹುದು ಎಂದು ನಂಬಿದವರು ಜೀವಿಸಿದ್ದರೆ ಅದು ಅವರ ಮೂರ್ಖತನದ ಬಿಂಬನೆಯಾಗಿದೆ.
ವಿಶ್ವದ ಸರ್ವ ಸ್ಥಳಗಳಲ್ಲಿ ಖುರ್ ಆನ್ ವಿವಾದಾತೀತ ವಾಗಿ ಆಲಿಕೆ ಗೊಳ್ಳುತ್ತಿದೆ. ವಸೀಮ್ ರಿಝ್ವಿ ಯವರು ನ್ಯಾಯಾಲಯಕ್ಕೆ ಮಾಡಿರುವ ಅಪೇಕ್ಷೆ ಧರ್ಮನಿಂದನೆ ಮತ್ತು ಧರ್ಮಕ್ಕೆ ಎಸಗಿರುವ ಅವಹೇಳನವಾಗಿದೆ.
ಈ ಬಗ್ಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ವಸೀಮ್ ರಿಝ್ವಿ ಯ ನಡೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತ ಪಡಿಸುತ್ತದೆ. ರಿಝ್ವಿ ಗೆ ಧರ್ಮ ಗ್ರಂಥದ ಬಗ್ಗೆಗಿನ ಜ್ಞಾನದ ಕೊರತೆಯಿದೆ. ರಿಝ್ವಿ ಯು ತನ್ನನ್ನು ಸ್ವಯಂ ಬಹಿಷ್ಕಾರ ಕ್ಕೊಳ ಪಡಿಸಿದ್ದಾರೆ. ದಿವ್ಯ ಗ್ರಂಥ ಕುರ್ ಆನ್ ಸ್ವಯಂ ನ್ಯಾಯ ಭೋದನೆ ಯಾಗಿ ದೆ. ಜಗತ್ತಿನ ಯಾವುದೇ ನ್ಯಾಯಾಲಯವು ದೇವ ಗ್ರಂಥದ ಮೌಲ್ಯಗಳನ್ನು ಗೌರವಿಸುವ ಚರಿತ್ರೆ ಯೆ ಇತಿಹಾಸದಲ್ಲಿ ನಡೆದು ಹೋಗಿದೆ. ಆದುದರಿಂದ ರಿಝ್ವಿ ಗೆ ಸೂಕ್ತ ಶಿಕ್ಷೆ ಆಗಲಿ.
ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ