janadhvani

Kannada Online News Paper

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಬಂಗ್ಲೆಗುಡ್ಡೆಗೆ: ಕಾರ್ಯಕ್ರಮ ಯಶಸ್ವಿಗೆ ಎಸ್ಸೆಸ್ಸೆಫ್ ಕಾರ್ಕಳ ಡಿವಿಷನ್ ಕರೆ

ಕಾರ್ಕಳ, ಮಾರ್ಚ್ 14; ಕಾರ್ಕಳ ಡಿವಿಷನ್, ನಾರ್ತ್ ಸೆಕ್ಟರ್ ವ್ಯಾಪ್ತಿಯ ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಸಂಸ್ಥೆಯ ಸ್ವಲಾತ್ ವಾರ್ಷಿಕ, ಮಹಿಳಾ ಸನದುದಾನ ಸಮ್ಮೇಳನ ಮಾರ್ಚ್ 14 ಆದಿತ್ಯವಾರ ಸಾಯಂಸಂಜೆ ನಡೆಯಲಿದೆ.

ಈ ಒಂದು ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ “ಶೈಖುನಾ ಎ.ಪಿ. ಉಸ್ತಾದ್”, ಸಯ್ಯಿದ್ ಸಾದಾತ್ ತಂಙಳ್, ನೌಫಲ್ ಸಖಾಫಿ ಕಳಸ ಇನ್ನಿತರ ಉಲಮಾ ಉಮಾರಾ, ಶೈಕ್ಷಣಿಕ, ಸಾಮಾಜಿಕ, ಸಂಘ ಸಂಸ್ಥೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಆದ್ದರಿಂದ ಈ ಒಂದು ಮಹತ್ತರವಾದ ಪುಣ್ಯ ಮಜ್ಲಿಸ್ ಪ್ರಚಾರಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಹಕರಿಸಿ ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಕಾರ್ಕಳ ಡಿವಿಷನ್ ಅಧ್ಯಕ್ಷ ಇಬ್ರಾಹಿಂ ಮದನಿ ಅಲ್-ಹುಮೈದಿ ಕುಕ್ಕುಂದೂರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಮಾಸ್ಟರ್ ಹೊಸ್ಮಾರ್, ಕೋಶಾಧಿಕಾರಿ ನವಾಝ್ ಬದ್ರಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ ಎಂದು ಡಿವಿಷನ್ ಮೀಡಿಯಾ ಸೆಲ್ ತಿಳಿಸಿದೆ.

error: Content is protected !! Not allowed copy content from janadhvani.com