ರಿಯಾದ್: ಸೌದಿ ಕಾರ್ಮಿಕರ ಬಹುನಿರೀಕ್ಷಿತ ಪರಿಷ್ಕೃತ ಉದ್ಯೋಗ ಕಾನೂನುಗಳು ಮಾರ್ಚ್ 14 ರ ಭಾನುವಾರದಿಂದ ಜಾರಿಗೆ ಬರಲಿವೆ. ನವೆಂಬರ್ 4 ರಂದು ಸೌದಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಘೋಷಣೆ ಮಾಡಿದೆ.
ಕಾರ್ಮಿಕ ವಿವಾದಗಳನ್ನು ತೊಡೆದುಹಾಕಲು ಹಾಗೂ ಉದ್ಯೋಗದಾತ ಮತ್ತು ಉದ್ಯೋಗಿಗಳ ನಡುವಿನ ಒಪ್ಪಂದದ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಈ ಯೋಜನೆಯು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ವಿದೇಶಿ ಕಾರ್ಮಿಕರಿಗೂ ಅನ್ವಯ. ಆದರೆ ಈ ಬದಲಾವಣೆ ಗೃಹ ಕಾರ್ಮಿಕರಿಗೆ ಅನ್ವಯಿಸುವುದಿಲ್ಲ. ಅಬ್ಷೀರ್ ಮತ್ತು ಖಿವಾ ಮುಂತಾದ ಪೋರ್ಟಲ್ಗಳ ಮೂಲಕ ಈ ಸೇವೆ ಲಭ್ಯವಿದೆ.
ಪರಿಷ್ಕೃತ ಕಾನೂನಿನ ಪ್ರಯೋಜನ
- ಕಾರ್ಮಿಕ ಮತ್ತು ಉದ್ಯೋಗದಾತ ನಡುವೆ ಸಹಿ ಮಾಡಿದ ಒಪ್ಪಂದದ ಆಧಾರದ ಮೇಲೆ ಕಾರ್ಮಿಕ ವಿವಾದಗಳಿಗೆ ಸಂಬಂಧಿಸಿದ ತೀರ್ಪು ನೀಡಲಾಗುತ್ತದೆ.
- ಒಪ್ಪಂದದ ಅವಧಿ ಮುಗಿದ ನಂತರ ಉದ್ಯೋಗಿಯು ಉದ್ಯೋಗದಾತರ ಒಪ್ಪಿಗೆಯಿಲ್ಲದೆ ಉದ್ಯೋಗಗಳನ್ನು ಬದಲಾಯಿಸಲು ಮತ್ತು ಪ್ರಾಯೋಜಕತ್ವವನ್ನು ಬದಲಾಯಿಸಲು ಅನುಮತಿಸಲಾಗುವುದು.
- ಒಪ್ಪಂದದ ಅವಧಿಯೊಳಗೆ ಕೆಲಸಗಾರನು ಉದ್ಯೋಗವನ್ನು ಬದಲಾಯಿಸಲು ಬಯಸಿದರೆ, ಉದ್ಯೋಗದಾತರಿಗೆ 90 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ ಈ ರೀತಿಯಾಗಿ ಸೇವೆಯನ್ನು ಕೊನೆಗೊಳಿಸಿದರೆ, ಉದ್ಯೋಗದಾತರಿಗೆ ಪರಿಹಾರವನ್ನು ಪಾವತಿಸಲು ಕೆಲಸಗಾರನು ಜವಾಬ್ದಾರನಾಗಿರುತ್ತಾನೆ.
- ಒಪ್ಪಂದದ ಅವಧಿ ಮುಗಿಯುವ ಮೊದಲು ನೌಕರನನ್ನು ವಜಾ ಮಾಡಿದರೆ ಉದ್ಯೋಗದಾತನು ಕೆಲಸಗಾರನಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ.
- ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಒಪ್ಪಂದದ ಸೇವೆ ಕೊನೆಗೊಂಡಲ್ಲಿ, ಕೆಲಸಗಾರನು ತನ್ನದೇ ಆದ ನಿರ್ಗಮನ ಮತ್ತು ಮರು-ಪ್ರವೇಶ ವೀಸಾಗಳನ್ನು ಪಡೆದುಕೊಂಡು ಮನೆಗೆ ಮರಳಬಹುದು. ಇದಕ್ಕೆ ಪ್ರಾಯೋಜಕರ ಅನುಮತಿ ಅಗತ್ಯವಿಲ್ಲ.
ಆದಾಗ್ಯೂ, ಕೆಲಸಗಾರನು ದೇಶವನ್ನು ತೊರೆದಾಗ, ಪ್ರಾಯೋಜಕರಿಗೆ ವಿದ್ಯುನ್ಮಾನವಾಗಿ ಸಂದೇಶ ಲಭಿಸಲಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ