janadhvani

Kannada Online News Paper

ಎಸ್.ವೈ.ಎಸ್ ಕಿನ್ಯ ಸೆಂಟರ್ ನೂತನ ಸಮಿತಿ ಅಸ್ತಿತ್ವಕ್ಕೆ

ಇಸ್ಮಾಯಿಲ್ ಹಾಜಿ ಪರಮಾಂಡ, ಇಸ್ಮಾಯಿಲ್ ಸಾಗ್, ಉಸ್ಮಾನ್ ಝುಹ್ರಿ ಕುರಿಯ ಸಾರಥಿಗಳು

ಬೆರಳೆಣೆಕೆಯ ಬ್ರಾಂಚ್ ಸಮಿತಿಗಳಿಂದ ಅಸ್ತಿತ್ವಕ್ಕೆ ಬಂದಿದ್ದ ದೇರಳಕಟ್ಟೆ ಸೆಂಟರ್ ಸಮಿತಿಯು ನಾಯಕರ,ಕಾರ್ಯಕರ್ತರ ಅವಿಶ್ರಾಂತ ಕಾರ್ಯಾಚರಣೆಯಿಂದ 17 ಬ್ರಾಂಚ್ ಸಮಿತಿಗಳನ್ನು ಹುಟ್ಟು ಹಾಕುವುದರ ಮೂಲಕ ಅತ್ಯಂತ ದೊಡ್ಡ ಸಂಟರ್ ಎಂಬ ಹಿರಿಮೆಗೆ ಪಾತ್ರವಾಗಿದೆ.

ಇದೀಗ ವಿಶಾಲವಾದ ದೇರಳಕಟ್ಟೆ ಸೆಂಟರ್ ಸಮಿತಿಯು ದೇರಳಕಟ್ಟೆ- ಕಿನ್ಯ ಸೆಂಟರ್ ಗಳಾಗಿ ಕಾರ್ಯಾಚರಣೆಗಿಳಿದಿದೆ.

ದ.ಕ ವೆಸ್ಟ್ ಸಮಿತಿ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲೀ ಸಖಾಫಿ,ರಾಜ್ಯ ಸಮಿತಿ ನಾಯಕ ಕೆ.ಎಚ್ ಇಸ್ಮಾಯಿಲ್ ಸಅದಿ ಕಿನ್ಯ ಹಾಗೂ ದೇರಳಕಟ್ಟೆ ಸೆಂಟರ್ ಸಮಿತಿ ಅಧ್ಯಕ್ಷ ಉರುಮಣೆ ಇಸ್ಮಾಯಿಲ್ ಸಅದಿ ಉಸ್ತಾದ್,ಸೆಂಟರ್ ನಾಯಕ ಏಷ್ಯನ್ ಅಹ್ಮದ್ ಹಾಜಿ ರವರ ನೇತೃತ್ವದಲ್ಲಿ ಎಸ್.ವೈ.ಎಸ್ ಕಿನ್ಯ ಸೆಂಟರ್ ಸಮಿತಿಗೆ ಹಾಜಿ ಬಿ.ಎಂ ಇಸ್ಮಾಯಿಲ್ ಪರಮಾಂಡ ಅಧ್ಯಕ್ಷರಾಗಿಯೂ ಕೆ.ಎಂ ಇಸ್ಮಾಯಿಲ್ ಸಾಗ್ ಪ್ರಧಾನ ಕಾರ್ಯದರ್ಶಿಯಾಗಿಯೂ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಕೋಶಾಧಿಕಾರಿಯಾದ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಉಳಿದಂತೆ ಮುಹಮ್ಮದ್ ಹನೀಫ್ ಸಾಮಣಿಗೆ, ಉಕ್ಕುಡ (ಉಪಾಧ್ಯಕ್ಷ) ಕಾರ್ಯದರ್ಶಿಗಳಾಗಿ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ (ಓರ್ಗನೈಝೇಶನ್ & ಟ್ರೈನಿಂಗ್) ವಿ.ಎ ಮುಹಮ್ಮದ್ ಮುಸ್ಲಿಯಾರ್ (ದಅ್‌ವಾ & ಎಜುಕೇಶನ್) ಅಬೂಬಕರ್ ಖುತುಬಿನಗರ, ಮೀನಾದಿ ( ಇಸ್ವಾಬ & ರಿಲೀಫ್) ಮುಹಮ್ಮದ್ ಉಳ್ಳಾಲ,ಉಕ್ಕುಡ ( ಮೀಡಿಯಾ & ಪಬ್ಲಿಷಿಂಗ್)

ಅಶ್ಅರಿಯ್ಯಾ ಮುಹಮ್ಮದ್ ಅಲೀ ಸಖಾಫಿ,ಕೆ.ಎಚ್ ಇಸ್ಮಾಯಿಲ್ ಸಅದಿ,ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ,ಅಬ್ಬಾಸ್ ಮೀನಾದಿ, ಇಸ್ಮಾಯಿಲ್ ಹಾಜಿ ಮಜಲ್, ಜಮಾಲ್ ಮಿತ್ತಡ, ಅಶ್ರಫ್ ಲಾಝ,ಫಾರೂಖ್ ಮೀನಾದಿ,ಅಬೂ ಸ್ವಾಲಿಅ್‌ ಖುತುಬಿನಗರ,ಝುಬೈರ್ ಪಾರ,ಮುಹಮ್ಮದ್ ಹನೀಫ್ ಸ್ಟೋರ್,ಮುಹಮ್ಮದ್ ನಡುದಾರಿ,ಅಬ್ದುಲ್ ಅಝೀಝ್ ಕೋಟಡಿ,ಆಲಿಕುಂಞಿ ಬಾಕಿಮಾರ್,ಸಿದ್ದೀಖ್ ಕೋಡಿ,ಅಬ್ದುರ್ರಹೀಂ ಎನ್.ಕೆ,ಅಬ್ದುಸ್ಸಲಾಂ ಬಾಕಿಮಾರ್,ರಿಯಾಝ್ ಕುರಿಯ,ಹಸನ್ ಉಕ್ಕುಡ,ಎ.ಪಿ ಇಬ್ರಾಹಿಂ,ಅಬ್ದುಲ್ ಮಜೀದ್ ಸಾಮಣಿಗೆ,ಮೂಸ ಬದ್ರಿಯ್ಯಾನಗರ,ಐ.ಎಂ ಅಶ್ರಫ್,ಸುಲೈಮಾನ್,ಅಬ್ಬಾಸ್ ಬದ್ರಿಯ್ಯಾನಗರ,ಮುಹಮ್ಮದ್ ರಫೀಖ್ ಬದ್ರಿಯ್ಯಾನಗರ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಎಸ್.ವೈ.ಎಸ್ ಕಿನ್ಯ ಸೆಂಟರ್ ಅದೀನದಲ್ಲಿ ಸಾಂತ್ವನ ತಂಡದ ಚೆಯರ್ಮಾನ್ ಆಗಿ ಅಶ್ಅರಿಯ್ಯಾ ಮುಹಮ್ಮದ್ ಅಲೀ ಸಖಾಫಿ ಕನ್ವೀನರ್ ಆಗಿ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ರವರನ್ನು ನೇಮಕ ಮಾಡಲಾಯಿತು.
ಕೆ.ಎಚ್ ಇಸ್ಮಾಯಿಲ್ ಸಅದಿ,ಹಾಜಿ ಬಿ.ಎಂ ಇಸ್ಮಾಯಿಲ್ ಪರಮಾಂಡ,ಕೆ.ಎಂ ಇಸ್ಮಾಯಿಲ್ ಸಾಗ್,ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ, ವಿ.ಎ ಮುಹಮ್ಮದ್ ಮುಸ್ಲಿಯಾರ್,ಅಬ್ದುಲ್ ಮಜೀದ್ ಸಾಮಣಿಗೆ,ಇಬ್ರಾಹಿಂ ಉಕ್ಕುಡ,ಐ.ಎಂ ಅಶ್ರಫ್,ಮುಹಮ್ಮದ್ ಹನೀಫ್ ಸ್ಟೋರ್,ಮುಹಮ್ಮದ್ ನಡುದಾರಿ,ಅಬೂಬಕರ್ ಖುತುಬಿನಗರ,ಅಬ್ಬಾಸ್ ಮೀನಾದಿ,ಜಮಾಲ್ ಮಿತ್ತಡ,ಎನ್.ಕೆ ರಹೀಂ,ಅಬ್ದುಸ್ಸಲಾಂ ಬಾಕಿಮಾರ್ ರವರನ್ನು ಸದಸ್ಯರನ್ನಾಗಿ ಆರಿಸಲಾಯಿತು.

error: Content is protected !! Not allowed copy content from janadhvani.com