ಕೊಣಾಜೆ: ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ವ್ಯಾಪ್ತಿಯ ಪಜೀರ್ ಶಾಖೆಯಲ್ಲಿ ಇತ್ತೀಚೆಗೆ ಮಹಾ ಸಭೆಯು ಶಾಖಾಧ್ಯಕ್ಷ ಇಕ್ಬಾಲ್ ಮದನಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಖತೀಬರಾದ ಬಹು ರಶೀದ್ ಸಹದಿ ನಡೆಸಿದರು.
ಕೊಣಾಜೆ ಸೆಕ್ಟರ್ ಅಧ್ಯಕ್ಷರಾದ ಉಸ್ಮಾನ್ ಪಜೀರ್, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಉಬೈದುಲ್ಲಾಹ್ ಆರ್ ಜಿ ನಗರ ಸಹಿತ ಮೇಲ್ಘಟಕದ ನಾಯಕರು ಭಾಗವಹಿಸಿದ್ದರು.
ಎಸ್ ವೈ ಎಸ್ ನಾಯಕ ಸಿದ್ದೀಖ್ ಸಖಾಫಿ ಸಂಘಟನಾ ತರಗತಿ ನಡೆಸಿದರು, ನೂತನ ಅಧ್ಯಕ್ಷರಾಗಿ ಹನೀಫ್ ಜೋಗಿಬೆಟ್ಟು, ಪ್ರಧಾನ ಕಾರ್ಯದರ್ಶಿ ಶಫೀಕ್ ಜೋಗಿಬೆಟ್ಟು, ಕೋಶಾಧಿಕಾರಿ ಯಾಸಿರ್ ಗ್ರಾಮಚಾವಡಿ, ಉಪಾಧ್ಯಕ್ಷರುಗಳಾಗಿ ನೌಫಲ್ ಉಸ್ತಾದ್,ಆಶೀಕ್ ನಡುಹಿತ್ಲು, ಕಾರ್ಯದರ್ಶಿಗಳಾಗಿ ಅಶ್ವಿದ್ ಕಾಪಿಕಾಡ್,ಇಜಾಝ್ ಜೋಗಿಬೆಟ್ಟು,ಸಾಬಿತ್ ಜೋಗಿಬೆಟ್ಟು,ನಸೀರ್ ನಡುಹಿತ್ಲು, ಸರ್ಫರಾಜ್ ಗ್ರಾಮಚಾವಡಿ, ನಾಸಿರ್ ಜೋಗಿಬೆಟ್ಟು ಆಯ್ಕೆಯಾದರು.
ನಿಕಟ ಪೂರ್ವ ಶಾಖಾ ಕಾರ್ಯದರ್ಶಿ ಅಶ್ವಿದ್ ಕಾಪಿಕಾಡ್ ಸ್ವಾಗತಿಸಿ,ನೂತನ ಕಾರ್ಯದರ್ಶಿ ಶಫೀಕ್ ಜೋಗಿಬೆಟ್ಟು ಧನ್ಯವಾದಗೈದರು.