ಸೌದಿ ಅರೇಬಿಯಾದ ರಿಯಾದಿನ ಅಲ್ ಇಮಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಸಹೋದರರೊಬ್ಬರನ್ನು, ರಿಯಾದಿನ ಪ್ರತಿಷ್ಠಿತ ಕ್ಲಿನಿಕ್ ನಲ್ಲಿ ಉನ್ನತ ವ್ಯದ್ಯರಾಗಿರುವ ಡಾಕ್ಟರ್ ಅಬ್ದುಲ್ ಮೊಯಿನ್ ಬ್ಯಾರಿ ಇವರ ಸಹಕಾರದಿಂದ ಕೆಸಿಎಫ್ ರಿಯಾದ್ ಸಮಿತಿಯು ದಮ್ಮಾಮಿನಿಂದ ಮಂಗಳೂರಿಗೆ ಕಳುಹಿಸಿತು.
ಮಂಗಳೂರಿಗೆ ತಲುಪಿದ ಕೂಡಲೇ ಕೆಸಿಎಫ್ ರಿಯಾದ್ ಆಯೋಜಿಸಿದ ಆಂಬುಲೆನ್ಸ್ ಮುಖಾಂತರ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ಮುಂದಿನ ಚಿಕಿತ್ಸೆಗೆ ಕರೆದೊಯ್ಯಲಾಯಿತು. ರೋಗ ಪತ್ತೆಯಾದ ದಿನಂದಿಂದ ಡಾಕ್ಟರ್ ಅಬ್ದುಲ್ ಮೊಯಿನ್ ಬ್ಯಾರಿ ಅವರು ರೋಗಿಗೆ ಬೇಕಾದ ಊಟ, ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಅದೇ ರೀತಿ ಕೆಸಿಎಫ್ ರಿಯಾದ್ ಸಮಿತಿ ಸದಸ್ಯರಾದ ಹಂಝ ಮೈಂದಾಳ , ನಿಝಾಮ್ ಸಾಗರ್, ಅಬ್ದುಲ್ ರಝಕ್ ಹಾಜಿ ಉಜಿರೆ ಹಾಗೂ ಇಸ್ಮಾಯಿಲ್ ಕಣ್ಣಂಗಾರ್ ರೋಗಿಗೆ ಬೇಕಾದ ಟಿಕೆಟ್, ದಸ್ತಾವೇಜು ಸಿದ್ಧಪಡಿಸುವಿಕೆ , ಸಾರಿಗೆ ಹಾಗೂ ಇನ್ನಿತರ ರೀತಿಯ ಸೇವೆಗಳನ್ನು ಒದಗಿಸಿದರು. ದಮ್ಮಾಮ್ ಕೆಸಿಎಫ್ ನೇತಾರರಾದ ಮುಹಮ್ಮದ್ ಮಲೆಬೆಟ್ಟು ಹಾಗೂ ಭಾಷಾ ಗಂಗಾವಳಿ ರೋಗಿಯನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ