janadhvani

Kannada Online News Paper

ಉಡುಪಿ ಮುಸ್ಲಿಂ ಜಮಾಅತ್ ನಿಂದ ತಾಲೂಕು ಸಂದರ್ಶನ ಹಾಗೂ ಆಯುಷ್ಮಾನ್ ಕಾರ್ಯಾಗಾರ

ಉಡುಪಿ:ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಜಿಲ್ಲಾ ನಾಯಕರ ತಾಲೂಕು ಸಂದರ್ಶನ, ಆಯುಷ್ಮಾನ್ ಮಾಹಿತಿ ಕಾರ್ಯಾಗಾರ ಹಾಗೂ ಕೋವಿಡ್-19 ಮತ್ತು ವಿಪತ್ತುಗಳ ನಿರ್ವಹಣಾ ತಂಡಗಳ ರಚನಾ ಕಾರ್ಯಾಕ್ರಮವನ್ನು ಇಂದು (ಆ:25) ಕಾರ್ಕಳ, ಕಾಪು ಹಾಗೂ ಉಡುಪಿ ಈ ಮೂರು ತಾಲೂಕುಗಳಲ್ಲಿ ನಡೆಸಲಾಯಿತು.

ಜಿಲ್ಲಾ ಮುಸ್ಲಿಂ ಜಮಾಅತ್ ನ ಉಪಾಧ್ಯಕ್ಷರಾದ ಬಿ.ಎಮ್ ಮೊಯ್ದಿನ್ ಎ ಆರ್ ಉಡುಪಿ ಇವರ ನೇತೃತ್ವದಲ್ಲಿ ನಡೆದ ಜಿಲ್ಲಾ ನಾಯಕರ ತಾಲೂಕು ಸಂದರ್ಶನ ನಿಯೋಗದಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ಶೇಖ್ ಮುಹಮ್ಮದ್ ಗೌಸ್, ಬಿ.ಎಸ್ ಎಫ್ ರಫೀಕ್ ಕುಂದಾಪುರ, ಕಾರ್ಯದರ್ಶಿಗಳಾದ ವೈ ಬಿ ಸಿ ಬಶೀರ್ ಮೂಳೂರು, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ನಾಸಿರ್ ಶೇಖ್ ಬೈಲೂರು,ಸುಬ್ಹಾನ್ ಅಹ್ಮದ್ ಹೊನ್ನಾಳ, ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ, ನಾಯಕರಾದ ಸುಲೈಮಾನ್ ವಿ.ಎ ಬಜಗೋಳಿ, ಅಬ್ದುಲ್ ಹಮೀದ್ ಅದ್ದು ಮೂಳೂರು, ಹೈದರ್ ಅಹ್ಸನಿ ಮೂಳೂರು, ಶಬೀರ್ ಸಖಾಫಿ ಉಚ್ಚಿಲ,ಹಾಜಿ ಮೊಯ್ದಿನ್ ಗುಡ್ವಿಲ್,ರಹ್ಮತುಲ್ಲ ಹೂಡೆ, ಶಹಾಬುದ್ದೀನ್ ಸಾಬ್, ರಫೀಕ್ ದೊಡ್ಡಣಗುಡ್ಡೆ, ಇಕ್ಬಾಲ್ ಪಕೀರ್ಣಕಟ್ಟೆ, ಬಶೀರ್ ಉಸ್ತಾದ್ ಮಜೂರು, ಇಬ್ರಾಹಿಂ ಐಡಿಯಲ್, ವೈ ಎಮ್ ಇಲ್ಯಾಸ್ ಕಟಪಾಡಿ, ಇಸ್ಮಾಯಿಲ್ ಶೇಖ್ ಮಿಯ್ಯಾರ್, ಅಬ್ಬು ಹಾಜಿ ಮೂಳೂರು, ವೈ ಬಿ ಸಿ ಬಾವು,ಮುರಾದಲಿ ಕಾಪು, ಅಬ್ದುಲ್ಲ ಮೂಳೂರು , ಮೊಯ್ದಿನ್ ನಿಟ್ಟೆ ಹಾಗೂ ಎಸ್ ವೈ ಎಸ್ , ಎಸ್ಸೆಸ್ಸೆಫ್ ನ ನಾಯಕರು ಜೊತೆಗಿದ್ದರು.

error: Content is protected !! Not allowed copy content from janadhvani.com