janadhvani

Kannada Online News Paper

ಖಮೀಸ್ ಮುಶೈತ್ ಕೆ.ಸಿ.ಎಫ್ ಅಧ್ಯಕ್ಷರಿಂದ ಕಾರ್ಮಿಕರಿಗೆ ತಾಯ್ನಾಡಿಗೆ ತೆರಳಲು ವ್ಯವಸ್ಥೆ

ಸೌದೀ ಅರೇಬಿಯಾ: ಇಲ್ಲಿಯ ಖಮೀಸ್ ಮುಶೈತ್‌ನ ಬೂಫಿಯಾದಲ್ಲಿ ಉದ್ಯೋಗದಲ್ಲಿದ್ದ ಮೂಡಿಗೆರೆಯ ಇಬ್ಬರು ವ್ಯಕ್ತಿಗಳಿಗೆ ಕೊರೋನಾ ಸಂದರ್ಭದಲ್ಲಿ ಕೆಲಸವಿಲ್ಲದೇ ಮತ್ತು ತಾಯ್ನಾಡಿಗೆ ಹೋಗಲು ಹಣವಿಲ್ಲದೆ ಸಂಕಷ್ಟ ಎದುರಾಯಿತು.

ಇದನ್ನು ಮನಗಂಡು ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ ಅಧ್ಯಕ್ಷ, ಬನ್ನೂರು ಜೆಸಿಸಿ ಸುನ್ನೀ ಫ್ರೆಂಡ್ಸ್‌ನ ಪ್ರ.ಕಾರ್ಯದರ್ಶಿಯಾಗಿರುವ ಅಬ್ದುಲ್ ರಝಾಕ್‌ರವರು ಕೂಡಲೇ ಕಾರ್ಯಪ್ರವೃತ್ತರಾಗಿ ಅವರ ಮಾಲೀಕರನ್ನು ಭೇಟಿಯಾಗಿ ಇಕಾಮ ವಿಸ್ತರಿಸಿ ಊರಿಗೆ ತೆರಳಲು ಅಲ್ಲಿಂದ ಏರ್‌ಪೋರ್ಟ್ ವರೆಗೆ ಬಸ್ ಮುಖಾಂತರ ಕಳುಹಿಸಿ ಬಳಿಕ ವಿಮಾನದ ಮೂಲಕ ತಾಯ್ನಾಡಿಗೆ ತಲುಪುವಂತೆ ಸಂಪೂರ್ಣ ಅರ್ಥಿಕವಾಗಿ ಸಹಕಾರವನ್ನು ನೀಡಿ ಮಾದರಿ ಕಾರ್ಯವನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇವರು ಪ್ರಸ್ತುತ ಪುತ್ತೂರು ತಾಲೂಕಿನ ಬನ್ನೂರಿನ ಕರ್ಮಲ ನಿವಾಸಿಯಾಗಿದ್ದಾರೆ. ಸುನ್ನೀ ಸಂಘಟನೆಗೆಳಲ್ಲಿ ಗುರುತಿಸಿಕೊಂಡವರು.

error: Content is protected !! Not allowed copy content from janadhvani.com