janadhvani

Kannada Online News Paper

ಅಜ್ಮೀರ್ ಖ್ವಾಜಾ ಕುರಿತು ಕೀಳಾಗಿ ಮಾತನಾಡಿದ ಟಿವಿ ನಿರೂಪಕ- ದೂರು ದಾಖಲಿಸಲು ಮನವಿ

ಶಿವಮೊಗ್ಗ: ಖಾಸಗಿ ವಾಹಿನಿಯ ನಿರೂಪಕರೊಬ್ಬರು ಖ್ವಾಜಾ ಗರೀಬ್ ನವಾಜ್ (ಅಜ್ಮಿರ್ ಶರೀಫ್) ಅವರ ಕುರಿತು ಕೀಳಾಗಿ ಮಾತನಾಡಿದ್ದಾರೆ. ಇದು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಅವರ ಮೇಲೆ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಂಜುಮನ್ ಎ ಇಸ್ಲಾಂ ಸಂಘಟನೆಯ ಸದಸ್ಯರು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇಸ್ಲಾಮಿಕ್ ಸಂತರು, ಇಸ್ಲಾಮ್ ಧರ್ಮ ಕುರಿತು ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿಸಲಾಗಿದೆ. ಶಾಂತಿ, ಸುವ್ಯವಸ್ಥೆಗೆ ಭಂಗ ತರುವ ವಾತಾವರಣ ಸೃಷ್ಟಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಘಟನೆಯ ಅಧ್ಯಕ್ಷ ಜಫ್ರುಲ್ಲಾ ಸತ್ತರ್ ಖಾನ್, ಕಾರ್ಯದರ್ಶಿ ನಿಸಾರ್ ಅಹಮದ್‌, ಉಪಾಧ್ಯಕ್ಷ ಅಸ್ತಾಫ್ ಅಹಮದ್‌, ಅಫ್ಜಲ್ ಬೇಗ್ ಮನವಿ ಸಲ್ಲಿಸಿದರು.

error: Content is protected !! Not allowed copy content from janadhvani.com