ದುಬೈ: ಇತ್ತೀಚೆಗೆ ದುಬೈಯಲ್ಲಿ ಮೃತಪಟ್ಟಿದ್ದ ಉಳ್ಳಾಲ ಮಿಲ್ಲತ್ನಗರ ನಿವಾಸಿ ಯು.ಟಿ.ಜಮಾಲ್ ಇವರ ಮೃತದೇಹದ ಅಂತಿಮ ಪ್ರಕ್ರಿಯೆಗಳನ್ನು ಕೆಸಿಎಫ್ ಯುಎಇ ಶಿಕ್ಷಣ ವಿಭಾಗದ ಅಧ್ಯಕ್ಷ ಇಬ್ರಾಹೀಂ ಸಖಾಫಿ ಕೆದುಂಬಾಡಿ ಹಾಗೂ ಕೆಸಿಎಫ್ ದುಬೈ ನಾರ್ತ್ ಝೋನ್ ಸಾಂತ್ವಾನ ವಿಭಾಗದ ಅಧ್ಯಕ್ಷ ಅಲಿ ಅಸ್ಗರ್ ಕೂಳೂರು ಇವರ ನೇತೃತ್ವದಲ್ಲಿ ನಡೆಸಲಾಯಿತು. ಕುಟುಂಬ ಸದಸ್ಯರು ಹಾಗೂ ಸಂಘಟನೆಯ ಇತರ ಕಾರ್ಯಕರ್ತರು ಈ ಸಂದರ್ಭದಲ್ಲಿ ಸಹಕರಿಸಿದ್ದರು.
ವದಂತಿಗಳಿಗೆ ಕಿವಿಗೊಡದಂತೆ ಕರೆ
ದುಬೈ ಹಾಗೂ ಅಬುದಾಬಿಗಳಲ್ಲಿ ಕೋವಿಡ್-19 ಕಾರಣ ಮೃತಪಟ್ಟವರ ಮೃತದೇಹಗಳನ್ನು ದಹನ ಮಾಡಲಾಗುತ್ತಿದೆ ಎಂಬ ಶಬ್ದ ಸಂದೇಶವೊಂದು ವಾಟ್ಸಪ್ನಲ್ಲಿ ಹರಿದಾಡುತ್ತಿದ್ದು ಇದು ಶುದ್ಧ ಸುಳ್ಳು ಎಂದು ಕೆಸಿಎಫ್ ಯುಎಇ ಪ್ರಕಾಶನ ವಿಭಾಗದ ಅಧ್ಯಕ್ಷ ಅಬ್ದುಲ್ ಕರೀಂ ಮುಸ್ಲಿಯಾರ್ ಸ್ಪಷ್ಪಪಡಿಸಿದ್ದಾರೆ. ಕೋವಿಡ್ 19 ಸಂಬಂಧ ಕನ್ನಡಿಗರು ಮೃತಪಟ್ಟಲ್ಲಿ ಅವರ ಮಯ್ಯತ್ ನಮಾಝ್, ದಫನ ಸೇರಿದಂತೆ ಇನ್ನಿತರ ತರ ಪ್ರಕ್ರಿಯೆಗಳನ್ನು ಕೆಸಿಎಫ್ ನಾಯಕರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಯುಎಇಯಲ್ಲಿ ಮೃತಪಟ್ಟ ತಮ್ಮ ಬಂಧುಗಳ ಅಂತ್ಯ ಸಂಸ್ಕಾರದ ಕುರಿತು ಊರಿನಲ್ಲಿರುವವವರು ಯಾವುದೇ ರೀತಿಯಲ್ಲಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ರೀತಿಯ ಸುಳ್ಳು ವಾಯ್ಸ್ ಸಂದೇಶಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಡಬಾರದು ಎಂದು ಅವರು ಹೇಳಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ