ಹೌದು.. ಈ ಲಾಕ್ ಡೌನ್ ಸಮಯದಲ್ಲಿ ಕೆಲವು ಅದಾಯ ಮೂಲಗಳನ್ನು ಹೊಂದಿರುವ ಜಮಾತಿಗರ ಕಾರ್ಯವೈಕರಿಯು ಪ್ರಸಂಶಾರ್ಹ ಎಂಬುವುರದಲ್ಲಿ ಸಂಶಯವಿಲ್ಲ. ಹಾಗಂತ ಊರಿಗೆ ಕೆಲವು ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗದ ಜಮಾಅತ್’ಗಳನ್ನು ಪ್ರಶ್ನಿಸುವುದು ಸರಿಯಲ್ಲ.
ನಾನು ತಿಳಿದ ಮಟ್ಟಿಗೆ ಕರಾವಳಿಯ ಬಹುತೇಕ ಮಸೀದಿಗಳು ಅಲ್ಲಿನ ಜಮಾಅತಿಗರ ವಂತಿಗೆ ಹಣದಿಂದ ನಡೆಯುತ್ತದೆ ಹೊರತು ಯಾವುದೇ ಹೂರಗಿನ ಫಂಡ್’ನಿಂದ ಅಲ್ಲ.
ಕೆಲವು ಮಸೀದಿಗಳಿಗೆ ಆದಾಯದ ಮೂಲಗಳೇ ಇಲ್ಲ, ಆ ಜಮಾತಿನ ಬಡವರ ಬೆವರ ಹನಿಯೇ ಅಲ್ಲಿನ ಜಮಾತಿನ ಪ್ರಮುಖ ಆದಾಯ. ಈ ಲಾಕ್ ಡೌನ್ ಸಂದರ್ಭದಲ್ಲಿ ಜಮಾತಿನ ಉಸ್ತಾದರಿಗೆ (ನಾಲ್ಕು ಉಸ್ತಾದರಿಗೆ) ಕನಿಷ್ಠ ವೇತನ ಅಂದರೂ ಅರವತ್ತು ಸಾವಿರ ಬೇಕಾಗುತ್ತದೆ. ಇದಲ್ಲದೆ ಕರೆಂಟ್ ಬಿಲ್ ಇನ್ನಿತರ ಖರ್ಚುಗಳನ್ನು ಕೂಡ ಭರಿಸಬೇಕು. ಹಾಗಾಗಿ ಇಂತಹ ಸಂದರ್ಭದಲ್ಲಿ ಅನಾವಶ್ಯಕವಾಗಿ ಆರ್ಟಿಕಲ್ ಬರೆದು ಯಾವುದೇ ಜಮಾಅತ್ ಕಮಿಟಿಗಳನ್ನು ಶಪಿಸದಿರಿ.
ಜಮಾಅತಿಗೆ ಬೇಕಾದಷ್ಟು ಆದಾಯ ಇದ್ದು ಕೂಡ ಅದನ್ನು ಇಂತಹ ಸಂಧರ್ಭದಲ್ಲಿ ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸದಿದ್ದರೆ ಅಂತಹ ಕಮಿಟಿಯನ್ನು ಊರಿನವರೇ ಪ್ರಶ್ನಿಸಿ ಪರಿಹಾರ ಒದಗಿಸುವಂತೆ ಒತ್ತಡ ಹೇರಬೇಕು.
ಅದು ಬಿಟ್ಟು ಕಮಿಟಿಗೆ ಬರುವ ಆದಾಯದ, ಖರ್ಚು ವೆಚ್ಚಗಳ ಲೆಕ್ಕ ಗೊತ್ತಿಲ್ಲದೆ ತೋಚಿದ್ದನ್ನೆಲ್ಲಾ ಗೀಚಿ ಶೇರು ಮಾಡುವ ಬದಲು ಊರಿಗೆ ತನ್ನಿಂದ ಏನಾದರೂ ಸಹಾಯ ಒದಗಿಸಲು ಸಾಧ್ಯವಾಗುವುದಾದರೆ ಅಂತಹ ಕೆಲಸಗಳತ್ತ ಹೆಚ್ಚಿನ ಮಹತ್ವ ಕೊಟ್ಟು ಊರಿನ ಕಷ್ಟಗಳಿಗೆ ನೆರವಾಗಬೇಕು.
-# ಹಸೈನಾರ್ ಮೊಂಟೆಪದವು















ಇನ್ನಷ್ಟು ಸುದ್ದಿಗಳು
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ