ಕನ್ನಡದ ಸಂಸ್ಕೃತಿ ಮತ್ತು ಸೌಂದರ್ಯವನ್ನು ಅನಾವರಣ ಗೊಳಿಸಲಿರುವ ಅನಿವಾಸಿ ಪ್ರತಿಭೆಗಳು
ಅಜ್ಮಾನ್ : ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ಸಮಿತಿ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವವು ಜನವರಿ 11 ರಂದು (ನಾಳೆ) ಅಜ್ಮಾನ್ ಉಮ್ಮುಲ್ ಮುಹ್’ಮಿನೀನ್ ಆಡಿಟೋರಿಯಂ ನಲ್ಲಿ ನಡೆಯಲಿದೆ.
ಪ್ರತಿಭೋತ್ಸವ ಜೊತೆಗೆ ಗಲ್ಫ್ ಇಷಾರ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಯುಎಇ ರಾಷ್ಟ್ರಪಿತ ಶೈಖ್ ಝಾಯಿದ್ ಜೀವಚರಿತ್ರೆಯ ಕನ್ನಡಾನುವಾದ “ಶತಮಾನದ ಶಕ್ತಿ ಶೈಖ್ ಝಾಯಿದ್” ಕೃತಿ ಬಿಡುಗಡೆ ಸೇರಿದಂತೆ ವಿವಿಧ ವರ್ಣನೀಯ ಕಾರ್ಯಕ್ರಮಗಳು ನಡೆಯಲಿದೆ.
ನವೆಂಬರ್ ತಿಂಗಳಲ್ಲಿ ಯುಎಇ ಯಾದ್ಯಂತ ಝೋನ್ ಮಟ್ಟದಲ್ಲಿ ನಡೆದ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಹ ಪ್ರತಿಭೆಗಳು ನ್ಯಾಷನಲ್ ಮಟ್ಟದ ಪ್ರತಿಭೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಕುಟುಂಬಗಳು ಮತ್ತು ಅನಿವಾಸಿ ಕನ್ನಡಿಗರು ಭಾಗವಹಿಸುವ ಈ ಕಾರ್ಯಕ್ರಮವು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಲಿದೆ.
ಬೆಳಿಗ್ಗೆ 8 ಘಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಜಲೀಲ್ ನಿಝಾಮಿ ಎಮ್ಮೆಮಾಡು ಅಧ್ಯಕ್ಷತೆಯಲ್ಲಿ ರಾಜ್ಯ ಎಸ್ ಎಸ್ ಎಫ್ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಉದ್ಘಾಟನೆ ನಿರ್ವಹಿಸಲಿದ್ದಾರೆ. ಕೆಸಿಎಫ್ ಐಎನ್’ಸಿ ಪ್ರಧಾನ ಕಾರ್ಯದರ್ಶಿ ಪಿಎಂ’ಹೆಚ್ ಹಮೀದ್ ಈಶ್ವರಮಂಗಿಲ ದಿಕ್ಸೂಚಿ ಭಾಷಣ ಮಾಡಲಿದ್ದು, ಪ್ರಮುಖ ಉಧ್ಯಮಿ ಬಿ ಎಂ ಅಶ್ರಫ್ ತುಂಬೆ (ಮೊಯಿದೀನ್ ವುಡ್ ವರ್ಕ್ಸ್, ಅಜ್ಮಾನ್) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ಅಧ್ಯಕ್ಷತೆಯಲ್ಲಿ ರಾಜ್ಯ ನಗರಾಭಿವೃದ್ಧಿ ಸಚಿವರಾದ ಜನಾಬ್ ಯುಟಿ ಖಾದರ್, ಮಾಜೀ ಕೇಂದ್ರ ಸಚಿವರೂ ಹಾಲೀ ವಿಧಾನ ಪರಿಷತ್ ಸದಸ್ಯರಾದ ಜನಾಬ್ ಸಿ ಎಂ ಇಬ್ರಾಹಿಂ, ಮಾಜೀ ಸಚಿವರಾದ ಜನಾಬ್ ರೋಷನ್ ಬೇಗ್, ವಿಶ್ವ ವಿಖ್ಯಾತ ಮರ್ಕಝ್ ಡೈರೆಕ್ಟರ್ ಬಹು ಅಬ್ದುಲ್ ಹಕೀಮ್ ಅಝ್ಹರಿ, ತುಂಬೆ ಗ್ರೂಪ್ ಛೇರ್ಮನ್ ಡಾ. ತುಂಬೆ ಮೊಯಿದೀನ್, ಡಾ. ಯುಟಿ ಇಫ್ತಿಖಾರ್ ಅಲಿ (ಸೆನಟ್ ಸದಸ್ಯರು, RGUHS), ಜನಾಬ್ ಶೈಖ್ ಭಾವಾ (ಫೈನಾನ್ಸ್ ಕಂಟ್ರೋಲರ್, ಕೆಸಿಎಫ್ ಐಎನ್’ಸಿ), ಝಕರಿಯ ಬಜ್ಪೆ (ಅಲ್ ಮುಝೈನ್ ಗ್ರೂಪ್), ಇಕ್ಬಾಲ್ ಸಿದ್ದಕಟ್ಟೆ (ಅಲ್ ರಾಬಿಹ ಗ್ರೂಪ್), ಆಸ್ಲಮ್ ವಿ ಎಂ (ಹ್ಯಾಪಿ ವರ್ಲ್ಡ್ ಟ್ರೇಡಿಂಗ್ ದುಬೈ), ಅನ್ವರ್ ನೆಲ್ಲಿಕುನ್ನ್ (ದುಬೈ), ಷರೀಫ್ ಕಾರಷ್ಶೇರಿ (ಸಿರಾಜ್ ದೈನಿಕ), ಸಲಾ ಮೂಸಾ ಹಸನುಲ್ ಮದನಿ (ದುಬೈ), ಅಬ್ದುಲ್ ಸಮದ್ ಎನ್ (AME ಗ್ರೂಪ್, ದುಬೈ), ಅಬ್ದುಲ್ ರಝಾಕ್ (ARIB ಗ್ರೂಪ್ ದುಬೈ), ಅಬೂಬಕರ್ ಸಅದಿ ನೆಕ್ರಾಜೆ (ಲೇಖಕರು, ಶತಮಾನದ ಶಕ್ತಿ ಶೈಖ್ ಝಾಯಿದ್), ಅಡ್ವಕೇಟ್ ಇಬ್ರಾಹಿಂ ಖಲೀಲ್ (ದುಬೈ), ನಝೀರ್ ಕೆಮ್ಮಾರ (ದುಬೈ) ಸೇರಿದಂತೆ ಹಲವು ಉಲಮಾ, ಉಮರಾ, ರಾಜಕೀಯ, ಸಾಮಾಜಿಕ ಕ್ಷೇತ್ರದ ಗಣ್ಯರುಗಳು, ಖ್ಯಾತ ಉದ್ಯಮಿಗಳು ಭಾಗವಹಿಸಲಿದ್ದಾರೆ.
ಕಿಡ್ಸ್, ಜೂನಿಯರ್, ಸಬ್ ಜೂನಿಯರ್, ಸೀನಿಯರ್, ಗರ್ಲ್ಸ್, ಲೇಡೀಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಕಿರಾ-ಅತ್, ಕನ್ನಡ, ಅರೇಬಿಕ್, ಮಲಯಾಳಂ ಹಾಡುಗಳು, ಕನ್ನಡ, ಅರೇಬಿಕ್, ಮಲಯಾಳಂ, ಇಂಗ್ಲಿಷ್, ಭಾಷಣ, ಪ್ರಬಂಧ, ಮೆಮೊರಿ ಟೆಸ್ಟ್, ರಸಪ್ರಶ್ನೆ, ಕೈಬರಹ,ದಫ್ಫ್ ಸ್ಪರ್ಧೆ, ಬುರ್ದಾ, ಚಿತ್ರಕಲೆ, ಔಟ್ ಒಫ್ ವೇಸ್ಟ್, ಅಡುಗೆ ಪಾಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಅತ್ಯಾಕರ್ಷಕ ಶೈಲಿಯಲ್ಲಿ ನಡೆಯಲಿದೆ. ಈಗಾಗಲೇ ವಿವಿಧ ಎಮಿರೇಟ್ಸ್ ಗಳಿಂದ ಹಲವಾರು ಕನ್ನಡಿಗ ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದು ಕಾರ್ಯಕ್ರಮದ ಸಿದ್ದತೆಗಳು ಅಂತಿಮ ಹಂತದಲ್ಲಿದೆ. ಗಲ್ಫ್ ಇಷಾರ ನಾಲ್ಕನೇ ಚಂದಾ ಅಭಿಯಾನಕ್ಕೆ ಈ ಸಂದರ್ಭದಲ್ಲಿ ಚಾಲನೆ ನಡೆಯಲಿದೆ.
ಯುಎಇ ಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಪ್ರತಿಭೋತ್ಸವ ಸಮಿತಿ ಛೇರ್ಮನ್ ಅಬ್ದುಲ್ ಖಾದರ್ ಸಾಲೆತೂರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
[poll id=”2″]