ಉಳ್ಳಾಲ: SSF ಕಿನ್ಯ ಸೆಕ್ಟರ್ ಅಧೀನದ ಬೆಳರಿಂಗೆ ಶಾಖೆಯ ವಾರ್ಷಿಕ ಮಹಾಸಭೆಯು ದಿನಾಂಕ 02-12-2018 ರಂದು ಸುನ್ನೀ ಸೆಂಟರ್ ಕಿನ್ಯ ಬೆಳರಿಂಗೆಯಲ್ಲಿ ಶಾಖಾಧ್ಯಕ್ಷ ಇಲ್ಯಾಸ್ ಕೂಡಾರ ಅವರ ಅಧ್ಯಕ್ಷತೆಯಲ್ಲಿ ನಡೆಯ್ತು.
SYS ಬೆಳರಿಂಗೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ V.A. ಮುಹಮ್ಮದ್ ಮುಸ್ಲಿಯಾರ್ ಸಭೆಯನ್ನು ಉಧ್ಘಾಟಿಸಿದರು.
2017-18 ನೇ ಸಾಲಿನ ವಾರ್ಷಿಕ ವರದಿಯನ್ನು ನೌಮಾನ್ ಕೂಡಾರ ಮತ್ತು ಲೆಕ್ಕ ಪತ್ರವನ್ನು ಫಯಾಝ್ ಕಿನ್ಯ ಮಂಡಿಸಿದರು.
SYS ಬೆಳರಿಂಗೆ ಬ್ರಾಂಚ್ ಅಧ್ಯಕ್ಷರಾದ ಮೆಹಬೂಬ್ ಸಖಾಫಿ ಕಿನ್ಯ ಸಂಘಟನೆಗಳ ಕಾರ್ಯ ವೈಖರಿಗಳ ಬಗ್ಗೆ ಬಹಳ ಅರ್ಥವತ್ತಾಗಿ ಕಾರ್ಯಕರ್ತರಿಗೆ ವಿವರಣೆ ನೀಡಿದರು.
2019-20 ರ ಸಾಲಿನ ನೂತನ ಪದಾಧಿಕಾರಿಗಳು
ಅಧ್ಯಕ್ಷರು ಇಲ್ಯಾಸ್ ಮದನಿ ಕೂಡಾರ, ಉಪಾಧ್ಯಕ್ಷರಾಗಿ ಹಾರಿಸ್ ಸಖಾಫಿ, ಇಸ್ಹಾಖ್ ಕಿನ್ಯ, ಪ್ರ.ಕಾರ್ಯದರ್ಶಿ ಝಹೀರ್ ಬೆಳರಿಂಗೆ, ಜೊತೆ ಕಾರ್ಯದರ್ಶಿಗಳು ಉವೈಸ್, ಸಿಧ್ಧೀಕ್, ಕೋಶಾಧಿಕಾರಿಯಾಗಿ ನೌಮಾನ್ ಕೂಡಾರ ಸಹಿತ 17 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.
ಸಭೆಯಲ್ಲಿ ಕಿನ್ಯ ಸೆಕ್ಟರ್ ಉಪಾಧ್ಯಕ್ಷ ಅಯ್ಯೂಬ್, ಚುನಾವಣಾ ಅಧಿಕಾರಿ ಆಶಿಕ್ ಮೀಂಪ್ರಿ ಹಾಗೂ ಕಿನ್ಯ ಸೆಕ್ಟರ್ ಜೊತೆ ಕಾರ್ಯಧರ್ಶಿ ಬಶೀರ್ ಕೂಡಾರ ಸಹಿತ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ಶಾಖಾಧ್ಯಕ್ಷ ಇಲ್ಯಾಸ್ ಕೂಡಾರ ಸ್ವಾಗತಿಸಿ, ಝಹೀರ್ ಬೆಳರಿಂಗೆ ಧನ್ಯವಾದಗೈದರು.
ವರದಿ:ಫಯಾಝ್ ಕಿನ್ಯ















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ