janadhvani

Kannada Online News Paper

ಬಾಲಕಿಯ ಅತ್ಯಾಚಾರ: ಕಠಿಣ ಶಿಕ್ಷೆಗೆ ಎಸ್ ವೈ ಎಸ್ ದ ಕ ಜಿಲ್ಲಾ ಸಮಿತಿ ಆಗ್ರಹ

ಮಂಗಳೂರು: ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿ ಅಪ್ರಾಪ್ತೆ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವುದು ಅಮಾನವೀಯವಾಗಿದ್ದು; ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ ಎಂದು ಅಭಿಪ್ರಾಯಪಟ್ಟಿರುವ ಎಸ್ ವೈ ಎಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಹೆಣ್ಮಕ್ಕಳ ಸುರಕ್ಷತೆಗಾಗಿ ಸರಕಾರ ವಿಶೇಷ ಮುತುವರ್ಜಿ ವಹಿಸುವಂತಾಗಬೇಕು. ಇಂತಹ ಅಪಾಯಗಳನ್ನು ತಪ್ಪಿಸಲು; ಗಂಡು-ಹೆಣ್ಣು ಪರಸ್ಪರ ಬೆರೆಯುವಿಕೆಗೆ ಅವಕಾಶ ಒದಗಿಸುವ ಯಾವುದೇ ಸನ್ನಿವೇಶ-ಸಂದರ್ಭ ಸೃಷ್ಟಿಯಾಗದಂತೆ ಸಂಬಂಧಪಟ್ಟವರು ಎಚ್ಚರಿಕೆ ವಹಿಸಬೇಕೆಂದೂ ಅವರು ಪತ್ರಿಕಾಪ್ರಕಟನೆಯಲ್ಲಿ ಅಭಿಪ್ರಾಯಿಸಿದ್ದಾರೆ.