janadhvani

Kannada Online News Paper

SSF ಹೂಹಾಕುವಕಲ್ಲು ಶಾಖೆಯಲ್ಲಿ ಧ್ವಜಾರೋಹಣ

ಕರುನಾಡ ಮಣ್ಣಿನಲ್ಲಿ SSF ಮೂವತ್ತು ವಸಂತಗಳನ್ನು ಪೂರೈಸಿದ ಸಂಧರ್ಭದಲ್ಲಿ, ರಾಜ್ಯದಾದ್ಯಂತ ನಡೆಯುವ ಧ್ವಜ ದಿನದ ಪ್ರಯುಕ್ತ SSF ಹೂಹಾಕುವಕಲ್ಲು ಶಾಖೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಖಾ ಅಧ್ಯಕ್ಷ ಹಮೀದ್ ತೋಟಾಲ್ ನಿರ್ವಹಿಸಿದರು.

ಬಾಳೆಪುಣಿ ಸೆಕ್ಟರ್ ಅಧ್ಯಕ್ಷರಾದ ಅಜೀಜ್ ಎಚ್ ಶುಭಾಷಯಗಳನ್ನು ಕೋರಿದರು. ಅಲ್ ಬಿಶಾರ ಎಜುಕೇಶನಲ್ ಕಾಂಪ್ಲೆಕ್ಸ್ ಗುವೇದಪಡ್ಪು ಇದರ ಜನರಲ್ ಮ್ಯಾನೇಜರ್ ಆದ ಹನೀಫ್ ಕಾಮಿಲ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು. SYS ಹೂಹಾಕುವಕಲ್ಲು ಬ್ರಾಂಚ್ ಅಧ್ಯಕ್ಷರಾದ ಮೊಹಿದಿನ್ ತೋಟಾಲ್ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಪಧಾದಿಕಾರಿಗಳು ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದರು.