janadhvani

Kannada Online News Paper

ಎಸ್‌ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್

ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಆಗಸ್ಟ್ 12 ಬುಧವಾರ ಮಧ್ಯಾಹ್ನ 3:00 ಗಂಟೆಗೆ ಎಸ್.ಕೆ ಮಲ್ಟಿ ಪರ್ಪಸ್ ಹಾಲ್ ನಂದರಪಡ್ಪು ಮುಡಿಪುನಲ್ಲಿ ನಡೆಯಲಿರುವ ಸೌಹಾರ್ದ ಸಂಗಮ,ಗ್ರಾಂಡ್ ಮೌಲಿದ್ ಮಜ್ಲಿಸ್ ಹಾಗೂ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನ ಪ್ರಿ ಸಿಟ್ಟಿಂಗ್ ಸಭೆಯು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಎಸ್.ಕೆ ಮಲ್ಟಿ ಪರ್ಪಸ್ ಹಾಲ್ ನಲ್ಲಿ ನಡೆಯಿತು.

ಎಸ್‌.ಜೆ.ಯು ಮುಡಿಪು ಝೋನಲ್ ಅಧ್ಯಕ್ಷ ಮಜೀದ್ ಸಅದಿ ಅಲ್ ಅಫ್ಳಲಿ ದುಆ:ಗೈದರು. ಎಸ್‌ವೈಎಸ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ರಾಜ್ಯ ಕಾರ್ಯದರ್ಶಿ ಮುಹಮ್ಮದಲಿ ಸಖಾಫಿ ಅಶ್ಅರಿಯ್ಯಾ, ಕೆ.ಎಂ.ಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಂ ಸಅದಿ ಕತ್ತರ್,ಜಿಲ್ಲಾ ಉಪಾಧ್ಯಕ್ಷರಾದ ಹಾಫಿಳ್ ಯಾಕೂಬ್ ಸ ಅದಿ ನಾವೂರು, ಬದ್ರುದ್ದೀನ್ ಅಝ್ಹರಿ ಕೈಕಂಬ, ತೌಸೀಫ್ ಸಅದಿ ಹರೇಕಳ, ಮಹಮ್ಮದ್ ಮದನಿ ಸಾಮಣಿಗೆ ಮೊದಲಾದವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುಹ್ಯಿದ್ದೀನ್ ಸಖಾಫಿ, ಸಿದ್ದೀಕ್ ಸಅದಿ ಮೊಂಟೆಪದವು, MKM ಸಖಾಫಿ ಕೊಡುಂಗಾಯಿ, ಆಸಿಫ್ ಸಖಾಫಿ ಮುಡಿಪು,
ಯೂಸುಫ್ ಮೂಲೆ, ಅಬ್ಬಾಸ್ ಹಾಜಿ ತೌಡುಗೋಳಿ, ಇಬ್ರಾಹಿಂ ಗೌಸಿಯಾ ಮುಡಿಪು, ಅಬೂಬಕ್ಕರ್ ಹಾಜಿ ಮಧ್ಯನಡ್ಕ, ಆಲಿಕುಂಞಿ ಮೋಂಟುಗೋಳಿ, ಖಾಲಿದ್ ಹಾಜಿ ಭಟ್ಕಳ, ಫಾರೂಕ್ ಶೇಡಿಗುರಿ, ಉಸ್ಮಾನ್ ಝುಹ್ರಿ ಕಿನ್ಯ, ನಝೀರ್ ಹಾಜಿ ಲುಲು, ಹಕೀಂ ಪೂಮಣ್ಣು, ಕಾಸಿಂ ಲತೀಫಿ, ಹಮೀದ್ ತೋಟಾಲ್, ಶರೀಫ್ ಮುಡಿಪು,ಅಸ್ಲಂ ಸಂಪಿಲ,ಮುನೀರ್ ಕಲ್ಮಿಂಜ, ಉಮರ್ ಮದನಿ ಬೋಳಿಯಾರ್, ಉಸ್ಮಾನ್ ಸಹರಾ, ಇಕ್ಬಾಲ್ ಮದ್ಯನಡ್ಕ, ಇಬ್ರಾಹಿಂ ಪೂಡಲ್, ಅಕ್ಬರ್ ಅಲಿ ಮದನಿ ಆಲಂಪಾಡಿ, ಫಝಲ್ ಮುಡಿಪು ಮುಂತಾದವರು ಉಪಸ್ಥಿತರಿದ್ದರು.

ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿರಿ...